ಮೂವರ ಬಂಧನ…. ಮತ್ತೊಬ್ಬ ಪರಾರಿ……
Advertisement
ವಿಜಯಸಾಕ್ಷಿ ಸುದ್ದಿ, ಗದಗ
ತಮ್ಮ ಸ್ವಂತ ಲಾಭಕ್ಕೋಸ್ಕರ ಸಾರ್ವಜನಿಕ ರಸ್ತೆಯ ಮೇಲೆ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಳದಡಿ ಗ್ರಾಮದ ಶ್ರೀರಾಮದೇವರ ಕಲ್ಯಾಣ ಮಂಟಪದ ಮುಂದಿನ ರಸ್ತೆಯಲ್ಲಿ ಬೆಳದಡಿಯ ಹನಮಪ್ಪ ನೀಲಪ್ಪ ಮಾಳಣ್ಣವರ, ಬೆಳದಡಿ ತಾಂಡಾದ ರಮೇಶ ಲಕ್ಷ್ಮಣ ತಂಬೂರಿ, ಬೆಳದಡಿಯ ಕೃಷ್ಣ ರಾಮಪ್ಪ ಭಜಂತ್ರಿ ಹಾಗೂ ದೇವರಾಜ ರಾಮಣ್ಣ ಮುಕ್ಕೋಜಿ ಇಸ್ಪೀಟ್ ಆಟದಲ್ಲಿ ತೊಡಗಿದ್ದರು.
ಈ ವೇಳೆ ಗದಗ ಗ್ರಾಮೀಣ ಠಾಣೆಯ ಪೊಲೀಸರು ದಾಳಿ ನಡೆಸಿದಾಗ ಮೊದಲ ಮೂವರು ಆರೋಪಿಗಳು ಸಿಕ್ಕಿಬಿದ್ದಿದ್ದು, ನಾಲ್ಕನೇ ಆರೋಪಿ ದೇವರಾಜ ರಾಮಣ್ಣ ಮುಕ್ಕೋಜಿ ಓಡಿಹೋಗಿದ್ದಾನೆ.
ಆರೋಪಿಗಳಿಂದ ಆಟಕ್ಕೆ ಬಳಸಿದ್ದ ಇಸ್ಪೀಟ್ ಎಲೆ ಹಾಗೂ 1630 ರೂ ಹಣವನ್ನು ವಶಕ್ಕೆ ಪಡೆಯಲಾಗಿದ್ದು, ಅಪರಾಧ:0149/2023, ಕೆಪಿ ಕಾಯ್ದೆ 1963ರ ಕಲಂ 87ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.