ಏನೂ ಕೆಲಸ ಮಾಡದಿರುವವರಿಗೆ ನನ್ನ ಅಭಿವೃದ್ಧಿ ಕಾರ್ಯಗಳೇ ಉತ್ತರ: ಸಚಿವ ಸಿ.ಸಿ. ಪಾಟೀಲ

0
Spread the love

10 ಕೋಟಿ 93 ಲಕ್ಷರೂಗಳ ಕಾಮಗಾರಿಗಳಿಗೆ ಚಾಲನೆ

Advertisement

ವಿಜಯಸಾಕ್ಷಿ ಸುದ್ದಿ, ರೋಣ

ಕೆಲವರು ಏನೂ ಕೆಲಸ ಮಾಡದೇ ಮಾತಾಡುವುದನ್ನು ಕಲಿತಿದ್ದು ಅಂಥವರ ಮಾತಿಗೆ ನನ್ನ ಅಭಿವೃದ್ದಿ ಕಾರ್ಯಗಳು ಉತ್ತರ ನೀಡುತ್ತಿವೆ. ರಾಜ್ಯ ಹಾಗೂ ದೇಶ ಕೋವಿಡ್ ಮಹಾಮಾರಿ ಸಮಸ್ಯೆಯಲ್ಲಿ ಸಿಲುಕಿದರೂ ಸಹ ನರಗುಂದ ಮತಕ್ಷೇತ್ರ ಅಭಿವೃದ್ಧಿಯಿಂದ ವಂಚಿತಗೊಂಡಿಲ್ಲ. ನರಗುಂದ ಮತಕ್ಷೇತ್ರದಲ್ಲಿ 1683 ಕೋಟಿ ರೂ.ಗಳ ವೆಚ್ಚದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳೇ ಇದಕ್ಕೆ ಸಾಕ್ಷಿ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

ಅವರು ಬುಧವಾರ ತಾಲೂಕಿನ ಯಾಸ ಹಡಗಲಿ ಗ್ರಾಮದಲ್ಲಿ 9 ಕೋಟಿ 25 ಲಕ್ಷ ರೂಗಳ ಹಾಗೂ ಯಾವಗಲ್ಲ ಗ್ರಾಮದಲ್ಲಿ 1 ಕೋಟಿ 68 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.

ಯಾಸ ಹಡಗಲಿ ಗ್ರಾಮ ರೋಣ ತಾಲೂಕಿನ ಕೊನೆ ಹಳ್ಳಿ ಅಭಿವೃದ್ಧಿಯಿಂದ ವಂಚಿತಗೊಂಡ ಗ್ರಾಮ ಎಂಬ ಹೆಗ್ಗಳಿಕೆಯನ್ನು ಈ ಹಿಂದೆ ಹೊಂದಿತ್ತು. ಆದರೆ ಈಗಿನ ಸ್ಥಿತಿಯಲ್ಲಿ ಗ್ರಾಮ ಸಂಪೂರ್ಣ ಬದಲಾಗಿದೆ. ಹಳೆ ಗ್ರಾಮದಿಂದ ನೂತನ ಗ್ರಾಮದವರೆಗೆ 1.5 ಕಿಮಿ ಸಿಸಿ ರಸ್ತೆಯಾಗುವ ಜೊತೆಗೆ 1 ಕೋಟಿಗೂ ಅಧಿಕ ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣಗೊಂಡಿದೆ. ಮುಖ್ಯವಾಗಿ ಗ್ರಾಮದ ಅಭಿವೃದ್ಧಿಗೆ 3 ಕೋಟಿ ರೂ. ಗಳ ಅನುದಾನವನ್ನು ನೀಡಲಾಗಿತ್ತು. ಈಗ ಮತ್ತೆ 9 ಕೋಟಿ 25 ಲಕ್ಷ ರೂ.ಗಳ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ ಎಂದ ಅವರು ಇನ್ನೂ ಯಾವಗಲ್ಲ ಗ್ರಾಮದ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡಿದ್ದು ಕೆಲವು ಕೆಲಸಗಳು ಮುಗಿದಿದ್ದು ಇನ್ನು ಕೆಲವು ಕಾಮಗಾರಿಗಳು ಪ್ರಗತಿಯಲ್ಲಿವೆ.

ಈಗ ಗ್ರಾಮದ ಅಭಿವೃದ್ಧಿಗೆ 1.68 ಲಕ್ಷ ರೂ.ಗಳ ಅನುದಾನವನ್ನು ನೀಡಲಾಗಿದ್ದು, ಹಲವು ವರ್ಷಗಳ ಬೇಡಿಕೆಯಾಗಿದ್ದ ಯಾವಗಲ್ಲ-ಶಲವಡಿ ರಸ್ತೆ ಸುಧಾರಣೆಗೆ 90 ಲಕ್ಷ ರೂ.ಗಳ ಅನುದಾನವನ್ನು ಬಿಡುಗಡೆಗೊಳಿಸಿ ಭೂಮಿ ಪೂಜೆಯನ್ನು ಮಾಡಲಾಗಿದೆ.

ಗ್ರಾಮದ ಜನರು ಈ ಹಿಂದೆ ಇಷ್ಟೊಂದು ಅಭಿವೃದ್ಧಿ ಕಾರ್ಯಗಳನ್ನು ನೋಡಿರಲಿಲ್ಲ. ಈಗ ಪ್ರತಿ ಬಡಾವಣೆಗಳು ಸಿಸಿ ರಸ್ತೆಯಿಂದ ಕೂಡಿದ್ದು, ಗ್ರಾಮದಲ್ಲಿ ಇನ್ನು ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಮುತ್ತಣ್ಣ ಜಂಗಣ್ಣವರ, ಅಶೋಕ ಹೆಬ್ಬಳ್ಳಿ, ಈರಪ್ಪ ತಾಳಿ ಸೇರಿದಂತೆ ಗ್ರಾಪಂ ಅಧ್ಯಕ್ಷರು, ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.

ಹಿಂದೆ ಆಡಳಿತ ನಡೆಸಿದವರು ಬರಿ ಮಾತಾಡಿದರೆ ಹೊರತು ಕೆಲಸ ಮಾಡಲಿಲ್ಲ. ಧರ್ಮಸಿಂಗ್ ಸರಕಾರವಿದ್ದಾಗ ಮುಖ್ಯಮಂತ್ರಿ ಬೊಮ್ಮಾಯಿಯವರು ಹಾಗೂ ನಾನು ರಕ್ತದಲ್ಲಿ ಪತ್ರ ಬರೆಯುವ ಮೂಲಕ ಮಹದಾಯಿ ಮತ್ತು ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿದ್ದು ಇತಿಹಾಸ. ಈಗ ನಮ್ಮ ಅಧಿಕಾರದಲ್ಲಿ ಅನುಷ್ಠಾನಕ್ಕೆ ಆದೇಶ ಬಂದಿದ್ದು, ಶೀಘ್ರ ಭೂಮಿ ಪೂಜೆಯನ್ನು ನೆರವೇರಿಸಲಾಗುವುದು.

ಸಿ.ಸಿ.ಪಾಟೀಲ, ಲೋಕೋಪಯೋಗಿ ಸಚಿವರು

Spread the love

LEAVE A REPLY

Please enter your comment!
Please enter your name here