ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ವಿರುದ್ಧ ಬಿ.ಬಿ. ಅಸೂಟಿ ವಾಗ್ದಾಳಿ; ಇನ್ಮುಂದೆ ನಿಮ್ಮ ಆಟ, ನಾಟಕ ನಡೆಯುವುದಿಲ್ಲ

0
Spread the love

ನಿಮ್ಮೆಲ್ಲಾ ನಾಟಕಗಳು ಮೇ.10ರಂದು ಕೊನೆಯಾಗಲಿದೆ. ಮತ್ತೆ ಬೆಂಗಳೂರಿಗೆ ಹೋಗಿ. ಐದು ವರ್ಷ ಅಲ್ಲೇ ಇರುವಂತೆ ಗದಗ ಜನರು ದಾರಿ ತೋರಿಸುತ್ತಾರೆ…….

ವಿಜಯಸಾಕ್ಷಿ ಸುದ್ದಿ, ಗದಗ

Advertisement

ರಾಷ್ಟ್ರೀಯ ಪಕ್ಷವೊಂದರ ಅಭ್ಯರ್ಥಿಯಾಗಿ, ಬಿಜೆಪಿಯ ಅನಿಲ್‌ ಮೆಣಸಿನಕಾಯಿ ಅವರು ನಾಪಪತ್ರ ಸಲ್ಲಿಕೆಗೆ ತೆರಳುತ್ತಿದ್ದಾರೆ ಎಂಬ ಮಾಹಿತಿಯನ್ನೂ ಪೊಲೀಸರಿಗೆ ನೀಡಿಲ್ಲ. ಎಚ್.ಕೆ. ಪಾಟೀಲರ ಹೆಸರಿಗೆ ಕಳಂಕ ತರಬೇಕೆಂಬುದೇ ಅವರ ಉದ್ದೇಶವಾಗಿತ್ತು ಎಂದು ಗದಗ-ಬೆಟಗೇರಿ ಶಹರ ಕಾಂಗ್ರೆಸ್ ಅಧ್ಯಕ್ಷ, ನಗರಸಭೆ ಮಾಜಿ ಅಧ್ಯಕ್ಷ  ಬಿ.ಬಿ. ಅಸೂಟಿ ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ವಿರುದ್ಧ ವಾಗ್ದಾಳಿ ನಡೆಸಿದರು.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗದುಗಿನ ಸಾತ್ವಿಕ ರಾಜಕೀಯಕ್ಕೆ ಅನಿಲ್ ಮೆಣಸಿನಕಾಯಿ ತಿಲಾಂಜಲಿಯಿಡುತ್ತಿದ್ದಾರೆ. ಸೋಮವಾರ ಶಾಸಕ ಎಚ್.ಕೆ. ಪಾಟೀಲ್ ಅಪಾರ ಬೆಂಬಲಿರೊಂದಿಗೆ ನಾಮಪತ್ರ ಸಲ್ಲಿಕೆಗೆ ಆಗಮಿಸಿದ್ದರು.

ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಕಾಂಗ್ರೆಸ್ ಕಾರ್ಯಕರ್ತರು ಇದ್ದಲ್ಲಿಗೇ ಅಗಮಿಸಿ, ಗಲಾಟೆ ಪ್ರಾರಂಭವಾಗಲು ಪ್ರಚೋದನೆ ನೀಡಿ, ಗೂಂಡಾ ವರ್ತನೆ ತೋರಿದ್ದಾರೆ. ಮಂಗಳವಾರ ನಾಮಪತ್ರ ಸಲ್ಲಿಸುವುದಾಗಿ ಹೇಳಿಕೆ ನೀಡಿದ್ದ ಅನಿಲ್‌, ಉದ್ದೇಶಪೂರ್ವಕವಾಗಿ ಸೋಮವಾರವೇ ನಾಮಪತ್ರ ಸಲ್ಲಿಸಲು ಬಂದಿದ್ದಾರೆ ಎಂದು ಆರೋಪಿಸಿದರು.

ಜಗದೀಶ್ ಶೆಟ್ಟರ್ ಪರ ಘೋಷಣೆ ಕೂಗಿದಾಗ ಕಾಂಗ್ರೆಸ್ ಕಾರ್ಯಕರ್ತರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದರು. ಅವರೇ ತಮ್ಮ ಕಾರ್ ಮೇಲೆ ಏರಿ ಬಾನೆಟ್‌ಗೆ ಹಾನಿ ಮಾಡಿದ್ದಾರೆ. ಅವರೇ ಕಾರಿನ ಗ್ಲಾಸ್ ಒಡೆದು ನಾಟಕ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿಗೆ ಗಲಾಟೆ ಮಾಡೋದು ಚಾಳಿಯಾಗಿದೆ ಎಂದು ಬಿ.ಬಿ ಅಸೂಟಿ ಹೇಳಿದರು.

ಮುಂದೆಯೂ ಇದೇ ರೀತಿ ಗದ್ದಲ, ಗಲಾಟೆ ಮಾಡುತ್ತಾರೆ. ಅನಿಲ್ ಮೆಣಸಿನಕಾಯಿಯವರೇ, ನಿಮ್ಮೆಲ್ಲಾ ನಾಟಕಗಳು ಮೇ.10ರಂದು ಕೊನೆಯಾಗಲಿದೆ. ಮತ್ತೆ ಬೆಂಗಳೂರಿಗೆ ಹೋಗಿ. ಐದು ವರ್ಷ ಅಲ್ಲೇ ಇರುವಂತೆ ಗದಗ ಜನರು ದಾರಿ ತೋರಿಸುತ್ತಾರೆ. ಮೆಣಸಿನಕಾಯಿಯವರೇ, ಇನ್ನುಮುಂದೆ ನಿಮ್ಮ ಆಟ, ನಾಟಕ‌ ನಡೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

2018ರ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯಲ್ಲಿದ್ದ ಕಾರ್ಯಕರ್ತ ಮಂಜುನಾಥ ಮುಳಗುಂದ ಜನೆವರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುತ್ತ, ಹುಲಕೋಟಿಯಲ್ಲಿ ಬಿಜೆಪಿ ಪರ ಪ್ರಚಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ಅತ್ಯಂತ ಶಾಂತ ರೀತಿಯಿಂದ ನಮ್ಮನ್ನೆಲ್ಲ ಬರಮಾಡಿಕೊಂಡು, ಬೀಳ್ಕೊಟ್ಟಿದ್ದರು.

ವಾಪಸ್‌ ಗದಗಕ್ಕೆ ಬಂದಾಗ, ಜೊತೆಗಿದ್ದ ಪಕ್ಷದ ಕಾರ್ಯಕರ್ತರು ತನ್ನ ಮೇಲೆ ಕಲ್ಲೆಸೆಯಬೇಕಿತ್ತು. ಆಗ ನಾವು ಅದನ್ನೇ ದೊಡ್ಡ ಪ್ರತಿಭಟನೆಯ ಅಸ್ತ್ರವಾಗಿಸಿಕೊಳ್ಳಬಹುದಿತ್ತು ಎಂದಿದ್ದರಂತೆ.

ಅವರ ಆ ಉದ್ದೇಶ, ಮಾತು ಈಗ ನಿಜವಾಗಿದೆ. ಬಿಜೆಪಿಯ ಸ್ನೇಹಿತರೇ ನೀಡಿರುವ ಮಾಹಿತಿಯಂತೆ, ಹುಲಕೋಟಿಯನ್ನೇ ಗುರಿಯಾಗಿಸಿಕೊಂಡು, ಗದ್ದಲವೆಬ್ಬಿಸಿ, ಅನುಕಂಪ ಪಡೆದು ನಂತರ ಗದಗಕ್ಕೆ ಬಂದು ಮತಯಾಚನೆ ಮಾಡುವ ಉದ್ದೇಶವಿದೆ ಎಂದು ಮಂಜುನಾಥ ಮುಳಗುಂದ ತಿಳಿಸಿದ್ದಾರೆ ಎಂದು ಹರಿಹಾಯ್ದರು.

ಈ ಸಂದರ್ಭದಲ್ಲಿ ವಿದ್ಯಾಧರ ದೊಡ್ಡಮನಿ, ಬಸವರಾಜ್ ಕಡೆಮನಿ, ಅಶೋಕ ಮಂದಾಲಿ, ಬಸವರಾಜ್ ಮನಗುಂಡಿ, ರಮೇಶ್ ಹೊನ್ನಿನಾಯ್ಕರ್ ಇದ್ದರು.


Spread the love

LEAVE A REPLY

Please enter your comment!
Please enter your name here