ಹೃದಯಾಘಾತದಿಂದ ಎಎಸ್ಐ ನಿಂಗೋಜಿ ನಿಧನ

0
Spread the love

ಬುಧವಾರ ಮಧ್ಯಾಹ್ನ ಹೊಂಬಳದಲ್ಲಿ ಅಂತ್ಯಕ್ರಿಯೆ

Advertisement

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ/ ಗಜೇಂದ್ರಗಡ

ERSS ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್ಐ ರಾಮಣ್ಣ ಎಸ್. ನಿಂಗೋಜಿ ಮಂಗಳವಾರ ಸಂಜೆ (58) ನಿಧನರಾದರು.

ಕಳೆದ ಭಾನುವಾರ ಸಂಜೆ ಕರ್ತವ್ಯ ಮುಗಿಸಿ ಮನೆಗೆ ಬಂದಿದ್ದ ಅವರಿಗೆ ಹೃದಯಾಘಾತ ಆಗಿತ್ತು. ತಕ್ಷಣವೇ ಚಿಕಿತ್ಸೆಗಾಗಿ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಂಗಳವಾರ ಸಂಜೆ ನಿಧನರಾದರು.

ಮೂರು ವರ್ಷಗಳ ಕಾಲ ಲಕ್ಷ್ಮೇಶ್ವರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಅವರು, ಇತ್ತೀಚಿಗೆ ಗಜೇಂದ್ರಗಡ ಠಾಣೆಗೆ ವರ್ಗಾವಣೆ ಹೊಂದಿದ್ದರು. ನಂತರ ಅವರಿಗೆ ಈಆರ್ ಎಸ್‌ ಎಸ್ ವಾಹನಕ್ಕೆ ನಿಯೋಜಿಸಲಾಗಿತ್ತು.

ಕರ್ತವ್ಯ ನಿಷ್ಠೆಗೆ ಹೆಸರಾಗಿದ್ದ ನಿಂಗೋಜಿ ಅವರ ನಿಧನಕ್ಕೆ ಸಹೋದ್ಯೋಗಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಬುಧವಾರ ಗದಗ ತಾಲೂಕಿನ ಹೊಂಬಳ ಗ್ರಾಮದಲ್ಲಿ ನಿಂಗೋಜಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಮೃತರಿಗೆ ಓರ್ವ ಪುತ್ರ, ಪುತ್ರಿ ಸೇರಿದಂತೆ ಅಪಾರ ಬಳಗವಿದೆ.


Spread the love

LEAVE A REPLY

Please enter your comment!
Please enter your name here