ಫೇಸ್‌ಬುಕ್‌ ತಾಣದಲ್ಲಿ ನೀತಿ ಸಂಹಿತೆ ಉಲ್ಲಂಘಿಸುವ ಪೋಸ್ಟ್: ಪ್ರಕರಣ ದಾಖಲು

0
Spread the love

ಅಭಿವೃದ್ಧಿ ಆಗದೇ ಇದ್ದರೂ ಪರವಾಗಿಲ್ಲ…….ನಮಗೆ ಧರ್ಮ ರಕ್ಷಣೆ ಮುಖ್ಯ, ಧರ್ಮ ಉಳಿಯಬೇಕಾದರೆ ಬರಬೇಕು ಬಿಜೆಪಿ……

Advertisement

ವಿಜಯಸಾಕ್ಷಿ ಸುದ್ದಿ, ರೋಣ

ಚುನಾವಣಾ ಅಧಿಕಾರಿಗಳಿಂದ ಯಾವುದೇ ಪೂರ್ವಾನುಮತಿ ಪಡೆಯದೇ ವ್ಯಕ್ತಿಯೊಬ್ಬರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪಕ್ಷವೊಂದರ ಪರವಾದ ಪೋಸ್ಟ್‌ ಹಾಕಿದ ಹಿನ್ನೆಲೆಯಲ್ಲಿ, ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ರೋಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಾರ್ಚ್.8ರಂದು ಆರೋಪಿ ಗಜೇಂದ್ರಗಡ ತಾಲೂಕಿನ ಶಾಂತಗೇರಿ ಗ್ರಾಮದ ಹನಮಪ್ಪ ಹಟ್ಟಿಮನಿ ಈತನು ತನ್ನ ಫೇಸ್‌ಬುಕ್‌ ಖಾತೆಯಲ್ಲಿ ‘ಅಭಿವೃದ್ಧಿ ಆಗಿದೆ ಇದ್ದರೂ ಪರವಾಗಿಲ್ಲ, ನಮಗೆ ಧರ್ಮ ರಕ್ಷಣೆ ಮುಖ್ಯ. ಧರ್ಮ ಉಳಿಯೋಕೆ ಬರಬೇಕು ಬಿಜೆಪಿʼ ಎಂದು ಪೋಸ್ಟ್‌ ಮಾಡಿದ್ದರು.

ಈ ಬಗ್ಗೆ ಫ್ಲೈಯಿಂಗ್‌ ಸ್ಕ್ವಾಡ್‌ ಆಗಿ ಕಾರ್ಯನಿವಹಿಸುತ್ತಿರುವ ಮಂಜುನಾಥ ಮೇಟಿ ಇವರು ಸದರಿಯವರ ಮೇಲೆ ಕ್ರಮ ಜರುಗಿಸುವಂತೆ ತಿಳಿಸಿದ್ದು, ರೋಣ ಪೊಲೀಸರು ಕಲಂ: 125, ಆರ್.ಪಿ. ಕಾಯ್ದೆ 1951ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here