HomeGadag Newsಎದಕ ಬರ್ತಾರಿಲ್ಲಿ, ದನ ಕಾಯಾಕ ಬಂದಾನೇನ ಅಂವ; ಕೃಷಿ ಅಧಿಕಾರಿಗಳಿಗೆ ಸಚಿವ ಸಿ.ಸಿ. ಪಾಟೀಲ ಲೆಫ್ಟ್...

ಎದಕ ಬರ್ತಾರಿಲ್ಲಿ, ದನ ಕಾಯಾಕ ಬಂದಾನೇನ ಅಂವ; ಕೃಷಿ ಅಧಿಕಾರಿಗಳಿಗೆ ಸಚಿವ ಸಿ.ಸಿ. ಪಾಟೀಲ ಲೆಫ್ಟ್ ರೈಟ್

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ

ತಾಲೂಕಿನ ಹಲವು ಸ್ಥಳಗಳಿಗೆ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಇಂದು ಶುಕ್ರವಾರ ಭೇಟಿ ನೀಡಿ ನೆರೆಹಾವಳಿ, ಬೆಳೆ ಹಾನಿಯ ಸಮೀಕ್ಷೆ ನಡೆಸಿದರು. ಈ ಸಂದರ್ಭದಲ್ಲಿ ಗದಗ ತಾಲೂಕಿನ ಹೊಂಬಳ ಗ್ರಾಮದಲ್ಲಿ ಮಳೆಯಿಂದಾಗಿ ಬೆಳೆ, ಜಮೀನು ಹಾನಿಯಾಗಿ ಸಂಕಷ್ಟ ಎದುರಿಸುತ್ತಿರುವ ರೈತ ಮಹಿಳೆ ಸುಮಿತ್ರಾ ಕಟ್ಟಿಮನಿ ಸಚಿವರೆದುರು ಕಣ್ಣೀರಿಟ್ಟು ಅಳಲು ತೋಡಿಕೊಂಡರು.

ಸುಮಿತ್ರಾರಿಗೆ ಸೇರಿದ 10 ಎಕರೆ ಜಮೀನು ಸಂಪೂರ್ಣ ಕೊಚ್ಚಿ ಹೋಗಿದೆ. ಸವಳು ಹಳ್ಳದ ಆರ್ಭಟಕ್ಕೆ ಜಮೀನಿನಲ್ಲಿ ಹಾಕಿದ್ದ ಮೆಣಸಿನಕಾಯಿ, ಈರುಳ್ಳಿ, ಶೇಂಗಾ, ಹೆಸರು ಬೆಳೆ ಸಂಪೂರ್ಣ ನಾಶವಾಗಿದೆ. ಸವಳು ಹಳ್ಳದ ಇಕ್ಕೆಲಗಳಲ್ಲಿ ಮುಳ್ಳುಕಂಟಿಗಳು ಯಥೇಚ್ಛವಾಗಿ ಬೆಳೆದಿದ್ದು ಹಳ್ಳ ತನ್ನ ದಾರಿ ಬದಲಿಸಿದ್ದೇ ಈ ಅವಾಂತರಕ್ಕೆ ಕಾರಣವೆಂಬ ಅಭಿಪ್ರಾಯಗಳು ರೈತರಿಂದ ಕೇಳಿಬಂದಿವೆ.

ಇದನ್ನೂ ಓದಿ ಗದಗದಲ್ಲಿ ಚಾಕುವಿನಿಂದ ಇರಿದು ಯುವಕನ ಕೊಲೆ

ಸಚಿವ ಸಿ.ಸಿ. ಪಾಟೀಲ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನೊಂದ ರೈತ ಮಹಿಳೆ ಸುಮಿತ್ರಾ, ಅತೀವ ನೋವಿನಿಂದ ತಮ್ಮ ದುಃಖ ತೋಡಿಕೊಂಡರು.

`ನೋಡ್ರಿ ಸಾಹೇಬ್ರೆ. ಬಡ್ಡಿ ಸಾಲ ಮಾಡಿ ಕೃಷಿ ಮಾಡಿದ್ದೆ. ಈ ಮಳೆಗೆ ಎಲ್ಲವೂ ಕೊಚ್ಚಿಹೋಯ್ತು. ಬೆಳೆ ನಾಶವಾಗಿದ್ದಷ್ಟೇ ಅಲ್ದೆ ಈ ಭೂಮಿ ಕೃಷಿ ಮಾಡೋಕೂ ಸಾಧ್ಯವಾಗದಂತೆ ಹಾನಿಗೊಳಗಾಯ್ತು. ಅಗದೀ ಫಲವತ್ತಾದ ಭೂಮಿ ನಮ್ದು. ಎಲ್ಲಾ ಬೆಳೆಗಳೂ ಹೋಯ್ತು. ಭೂಮಿಯೂ ಹಾಳಾಯ್ತು. ಮಣ್ಣು ಕೊಚ್ಚಿಹೋಗಿ, ಗರಸುಮಣ್ಣು ಮತ್ತು ಮರಳು ಹೊಲದಲ್ಲಿ ಎರಡು-ಮೂರು ಅಡಿಗಳಷ್ಟು ನಿಂತಿದೆ. ಈಗ ಮತ್ತೆ ಭೂಮಿ ಹಸನು ಮಾಡಿ ಬೆಳೆ ಬೆಳೆಯೋದಾದ್ರೂ ಹ್ಯಾಂಗ್ರೀ? ಅಲ್ಲೀವರೆಗೆ ನಾವು ಬದುಕು ನಡೆಸೋಕೆ ದಾರಿ ಯಾವ್ದು ಸರ್? ನಮಗೆ ಜಮೀನು ಸರಿ ಮಾಡಿಸಿಕೊಡಿ. ನಮಗೆ ನ್ಯಾಯ ಕೊಡಿಸಿ, ಪರಿಹಾರ ಒದಗಿಸಿ. ಹೇಗಾದರೂ ಬದುಕಿಕೊಳ್ತೇವೆ’ ಎಂದು ಕಣ್ಣೀರು ಹಾಕಿದರು.

ಜಂಟಿ ಕೃಷಿ ನಿರ್ದೇಶಕರ ವಿರುದ್ಧ ಗರಂ ಆದ ಸಿ.ಸಿ. ಪಾಟೀಲ್

ತಾಲೂಕಿನ ಹೊಂಬಳ ಗ್ರಾಮದಲ್ಲಿ ಬೆಳೆಹಾನಿ ವೀಕ್ಷಣೆಯ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕರನ್ನು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ ತರಾಟೆಗೆ ತೆಗೆದುಕೊಂಡರು. ಪ್ರಸ್ತುತ ಮಹಿಳೆಯ ಕೃಷಿ ಭೂಮಿ ಹಾಳಾದ ವಿಷಯವನ್ನು ಚರ್ಚೆಸುವದಕ್ಕಾಗಿ ಕೃಷಿ ಅಧಿಕಾರಿಗಳನ್ನು ಸಚಿವರು ಕೇಳಲು ಮುಂದಾದರು. ಆದರೆ, ಈ ವೇಳೆ ಅಧಿಕಾರಿಗಳು ಸ್ಥಳದಲ್ಲಿ ಗೈರಾಗಿರುವದಕ್ಕೆ ಕೆಂಡಾಮಂಡಲವಾದರು.

ಸರ್ವೆ ಮಾಡಬೇಕಾದರೆ ಜಿಲ್ಲಾ ಮಟ್ಟದ ಅಧಿಕಾರಿಗಳು ನನ್ನ ಹಿಂದೆ ಇರಬೇಕು. ಜಂಟಿ ಕೃಷಿ ನಿರ್ದೇಶಕ ಒಂದು ಕಿಲೊಮೀಟರ್ ಹಿಂದ ಅದಾನ ಅಂದ್ರ ದನಾ ಕಾಯಾಕ ಹೋಗಲಿ ಎಂದು ಸಿಸಿ ಪಾಟೀಲ ತಮ್ಮ ಆಪ್ತ ಸಹಾಯಕರಿಗೆ ಗದರಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!