ಗಾಂಜಾ ಮಾರಾಟದ ಆರೋಪಿ ಸೆಟ್ಲಮೆಂಟ್‌ನ ಮಂಜುನಾಥ ಮಾರುತಿ ಹಲಕುರ್ಕಿ ಅಲಿಯಾಸ್ ಡಿಸ್ಕವರಿ ಮಂಜ್ಯಾನಿಗೆ 7 ವರ್ಷ ಕಠಿಣ ಶಿಕ್ಷೆ, 50 ಸಾವಿರ ರೂ. ದಂಡ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಸ್ವಂತ ಲಾಭಕ್ಕೋಸ್ಕರ ಅನಧಿಕೃತವಾಗಿ ಗಾಂಜಾ ಮಾರಾಟ ಮಾಡುವ ಉದ್ದೇಶದಿಂದ ತನ್ನ ಬಳಿ ಇಟ್ಟುಕೊಂಡಿದ್ದ ಆರೋಪಿತನಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿದೆ.

ದಿ. 1.3.2017ರಂದು 12.40ರ ಸುಮಾರಿಗೆ ಬೆಟಗೇರಿ ದಂಡಿನ ದುರ್ಗಮ್ಮ ಗುಡಿಯ ಹತ್ತಿರ ಮನ್ಸುಪ್‌ಲಾಲ್ ಪುಣೇಕರ್ ಅವರ ಹೊಲದಲ್ಲಿರುವ ಹಳೆಯ ಗೋಡೌನ್ ಹತ್ತಿರ ಆರೋಪಿತನಾದ ಬೆಟಗೇರಿ ಸೆಟ್ಲಮೆಂಟ್‌ನ ಮಂಜುನಾಥ ಮಾರುತಿ ಹಲಕುರ್ಕಿ@ ಡಿಸ್ಕವರಿ ಮಂಜ್ಯಾನಿಗೆ ಕೋರ್ಟ್ ಶಿಕ್ಷೆ ವಿಧಿಸಿದೆ.

ಆರೋಪಿ ಮಂಜುನಾಥ ಈತ ಒಟ್ಟೂ 1 ಕೆಜಿ 20 ಗ್ರಾಂ. ತೂಕದ, 10 ಸಾವಿರ ರೂ. ಕಿಮ್ಮತ್ತಿನ ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ತನ್ನ ವಶದಲ್ಲಿಟ್ಟುಕೊಂಡಿದ್ದಾಗ, ಆರಕ್ಷಕ ಅಧೀಕ್ಷಕರು ಗದಗ ಹಾಗೂ ಆರಕ್ಷಕ ಉಪ ಅಧೀಕ್ಷಕರ ಮಾರ್ಗದರ್ಶನದಂತೆ ಅಂದಿನ ಬೆಟಗೇರಿ ಪೊಲೀಸ್ ಠಾಣೆಯ ಪಿಎಸ್‌ಐ ಎಂ.ಡಿ.ಮಡ್ಡಿರವರು ದಾಳಿ ನಡೆಸಿ ಗಾಂಜಾವನ್ನು ವಶಪಡಿಸಿಕೊಂಡಿದ್ದರು.

ಈ ಬಗ್ಗೆ ಎನ್‌ಡಿಪಿಎಸ್ ಆ್ಯಕ್ಟ್ ಪ್ರಕರಣವನ್ನು ಮಹಿಳಾ ಪಿಎಸ್‌ಐ ಎಸ್.ಎಸ್.ಸೊರಟೂರ ದಾಖಲಿಸಿಕೊಂಡು, ಬೆಟಗೇರಿ ಸಿಪಿಐ ವಿ.ಕೆ.ಯಡಹಳ್ಳಿ ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಸದರಿ ಪ್ರಕರಣದಲ್ಲಿ ಮಲ್ಲಿಕಾರ್ಜುನಗೌಡ.ಬಿ. ದೊಡ್ಡಗೌಡರ ಸರ್ಕಾರದ ಪರವಾಗಿ ವಾದ ಮಂಡಿಸಿದ್ದು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಏ.19ರಂದು ಹೆಚ್ಚುವರಿ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾ. ರಾಜೇಶ್ವರ ಎಸ್.ಶೆಟ್ಟಿ ಇವರು ಆರೋಪಿತನಿಗೆ 7 ವರ್ಷಗಳ ಕಠಿಣ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸದರಿ ಪ್ರಕರಣದಲ್ಲಿ ಉತ್ತಮ ತನಿಖೆ ನಡೆಸಿ, ಆರೋಪಿಗೆ ಶಿಕ್ಷೆಯಾಗುವಲ್ಲಿ ಪ್ರಮುಖ ಪಾತ್ರವಹಿಸಿದ ಪ್ರಕರಣದ ತನಿಖಾಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಬಿ. ಎಸ್ ನೇಮಗೌಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here