ಹೆಸ್ಕಾಂ ನೌಕರ, ಸ್ಟಾಫ್ ನರ್ಸ್ ಮನೆಗಳ ಬೀಗ ಮುರಿದು ಭಾರಿ ಕಳ್ಳತನ; ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಲೂಟಿ

0
Spread the love

ಇಬ್ಬರು ಸರಕಾರಿ ನೌಕರರ ಮನೆಗಳ ಬೀಗದ ಕೊಂಡಿ ಮುರಿದು ಚಿನ್ನಾಭರಣ ಕಳ್ಳತನ……..

Advertisement

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ

ಇಬ್ಬರು ಸರಕಾರಿ ನೌಕರರ ಮನೆಯ ಬೀಗದ ಕೊಂಡಿ ಮುರಿದು ನಗದು ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಲೂಟಿ ಮಾಡಿದ ಜರುಗಿದೆ.

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ಟಾಫ್ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಶೋಭಾ ತಂದೆ ನಿಜಲಿಂಗಪ್ಪ ನಾರಾಯಣಿ ಎಂಬುವರು ಕಾರ್ಯನಿಮಿತ್ತ ಬಾಗಲಕೋಟಗೆ ಹೋದಾಗ ಸರಕಾರಿ ಆಸ್ಪತ್ರೆಯ ವಸತಿ ಗೃಹದ ಬೀಗದ ಕೊಂಡಿ ಮುರಿದು ಒಳಹೊಕ್ಕ ಕಳ್ಳರು, ಟ್ರೇಜರಿಯ ಕೀಲಿ ಮೀಟಿ ಅದರೊಳಗೆ ಇದ್ದ 2.60.500 ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿಯ ಆಭರಣಗಳು ಹಾಗೂ ನಗದು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಇಲ್ಲಿನ ಬಸವೇಶ್ವರ ನಗರದ ಹೆಸ್ಕಾಂ ಉದ್ಯೋಗಿ ಶಿವರಾಜ್ ತಂದೆ ಮಾಲಿಂಗಪ್ಪ ರಾಮನಗೌಡರ ಇವರ ಮನೆಗೆ ಹಾಕಿದ ಬೀಗದ ಕೊಂಡಿ ಮುರಿದು ಒಳಹೊಕ್ಕು ಮನೆಯ ಬೆಡ್ ರೂಮ್ ದಲ್ಲಿದ್ದ ಟ್ರೇಜರಿ ಕದ ತಗೆದು ಅದರಲ್ಲಿದ್ದ ಸುಮಾರು 36 ಸಾವಿರ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here