ಬಸವೇಶ್ವರ ದೇವಸ್ಥಾನದಲ್ಲಿ ಬೃಹತ್ ನಾಗರಹಾವು ಪ್ರತ್ಯಕ್ಷ

0
Spread the love

ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದ ಉರಗತಜ್ಞ ಸುರೇಶ್…..

Advertisement

ವಿಜಯಸಾಕ್ಷಿ ಸುದ್ದಿ, ಗದಗ

ಇವತ್ತು ಸೋಮವಾರ ಬಸವಣ್ಣನ ದರ್ಶನಕ್ಕೆ ಹೋಗಿದ್ದ ಭಕ್ತರಿಗೆ ನಾಗರಹಾವು ಕಂಡು ಕೆಲಕಾಲ ಗಾಬರಿಬಿದ್ದ ಘಟನೆ ನಡೆದಿದೆ.

ಇದನ್ನೂ ಓದಿ ಗದಗ-ಬೆಟಗೇರಿ ಅವಳಿ ನಗರದಲ್ಲಿ ಮಂಗಳವಾರ ನೀರು ಪೂರೈಕೆಯ ಸ್ಥಳಗಳು

ಗದಗ ತಾಲೂಕಿನ ಚಿಂಚಲಿ ಗ್ರಾಮದ ಗುಡ್ಡದಲ್ಲಿ ಇರುವ ಬಸವೇಶ್ವರ ದೇವಸ್ಥಾನಕ್ಕೆ ಹೋಗಿದ್ದ ಭಕ್ತರಿಗೆ ಬೃಹತ್ ಆಕಾರದ ನಾಗರಹಾವು ಕಂಡಿದೆ. ಇದರಿಂದಾಗಿ ಮಹಿಳೆಯರು ಹಾಗೂ ಮಕ್ಕಳು ಕೆಲಕಾಲ ತೀವ್ರ ಆತಂಕಗೊಂಡರು.

ಗೋಡೆ ಏರಲು ನಾಗರಹಾವು ಪ್ರಯತ್ನ ಮಾಡುತ್ತಲೇ ಇದ್ದರೆ, ಕೆಲ ಯುವಕರು ಅದರ ವಿಡಿಯೋ ಮಾಡುತ್ತಿದ್ದರು. ಅದರಲ್ಲಿ ಒಬ್ಬರು ಪಕ್ಕದ ಕಳಸಾಪೂರ ತಾಂಡಾದ ಉರಗ ತಜ್ಞ ಸುರೇಶನಿಗೆ ಫೋನ್ ಮಾಡಿ ಸ್ಥಳಕ್ಕೆ ಕರೆಸಿದ್ದಾರೆ.

ಸುರೇಶ್ ಸ್ಥಳಕ್ಕೆ ಬಂದು ಬಸವಣ್ಣನ ಗರ್ಭಗುಡಿಯಲ್ಲಿ ಇದ್ದ ಬೃಹತ್ ನಾಗರಹಾವನ್ನು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿದ್ದಾರೆ.


Spread the love

LEAVE A REPLY

Please enter your comment!
Please enter your name here