ಎಸ್‌ಬಿಐ ಬ್ಯಾಂಕ್‌ನ ಸಿಬ್ಬಂದಿ ಹೆಸರಲ್ಲಿ ಗ್ರಾಹಕನ ಲಕ್ಷಾಂತರ ರೂ. ಹಣ ವರ್ಗಾವಣೆ;

0
Spread the love

ಪೇಟಿಎಮ್‌ನಲ್ಲಿ ಆಯಕ್ಷಿಸ್‌ ಮ್ಯೂಚುವಲ್‌ ಫಂಡ್‌ನಿಂದ 49,100 ರೂ ಹಣ ಬರಬೇಕಿದೆ ಎಂದಿದ್ದ ಗ್ರಾಹಕರು……..

Advertisement

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ

ಎಸ್‌ಬಿಐ ಬ್ಯಾಂಕ್‌ನ ಸಿಬ್ಬಂದಿಯೆಂದು ಹೇಳಿ, ಬ್ಯಾಂಕ್‌ನ ಕಡೆಯಿಂದ ಏನಾದರೂ ಸಮಸ್ಯೆಯಾಗಿದ್ದರೆ ಪರಿಹರಿಸುತ್ತೇವೆಂದು ನಂಬಿಕೆ ಹುಟ್ಟಿಸಿ, ಸಮಸ್ಯೆ ಬಗೆಹರಿಸುವ ನೆಪದಲ್ಲಿ ಯಾಮಾರಿಸಿ ವ್ಯಕ್ತಿಯೊಬ್ಬರ ಬ್ಯಾಂಕ್‌ ಖಾತೆಯಿಂದ ಹಂತ ಹಂತವಾಗಿ ಲಕ್ಷಾಂತರ ರೂ ಹಣವನ್ನು ದೋಚಿದ ಪ್ರಕರಣವೊಂದು ಗಜೇಂದ್ರಗಡ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರಕರಣದ ದೂರುದಾರ ಗಜೇಂದ್ರಗಡದ ಕಡ್ಡಿಯವರ ಪ್ಲಾಟ್‌ನ ಕಲ್ಲಪ್ಪ ಸಿದ್ದಪ್ಪ ರಾಜೂರರಿಗೆ ಕರೆಮಾಡಿದ ಅಪರಿಚಿತನೊಬ್ಬ ತಾನು ಎಸ್‌ಬಿಐ ಬ್ಯಾಂಕ್‌ ವತಿಯಿಂದ ಕರೆ ಮಾಡುತ್ತಿದ್ದೇನೆಂದು ತಿಳಿಸಿದ್ದರು.

ನಿಮಗೇನಾದರೂ ಮಾಹಿತಿಯ ಅಗತ್ಯವಿದೆಯೇ ಎಂದು ಕೇಳಿದಾಗ, ದೂರುದಾರರು, ಇವರು ನಿಜವಾಗಿಯೂ ಬ್ಯಾಂಕ್‌ ಕಡೆಯವರು ಎಂದು ತಿಳಿದು, ಪೇಟಿಎಮ್‌ನಲ್ಲಿ ಆಯಕ್ಷಿಸ್‌ ಮ್ಯೂಚುವಲ್‌ ಫಂಡ್‌ನಿಂದ 49,100 ರೂ ಹಣ ಬರಬೇಕಿದೆ ಎಂದು ತಿಳಿಸಿದ್ದರು.

ಆಗ ಕರೆ ಮಾಡಿದ್ದ ಆರೋಪಿಯು ತಾನು ಹೇಳಿದ ಹಾಗೆ ಮೊಬೈಲ್‌ನಲ್ಲಿ ಟೈಪ್‌ ಮಾಡಿದರೆ ಹಣ ಸಿಗುತ್ತದೆ. ಮೊಬೈಲ್‌ಗೆ ಬರುವ ಪಾಸ್‌ವರ್ಡ್‌ಗಳನ್ನು ಹೇಳುತ್ತ ಹೋಗಿ ಎಂದಿದ್ದರು.

ಆರೋಪಿ ಹೇಳಿದಂತೆಯೇ ಮಾಡಿದಾಗ, ದೂರುದಾರರ ಬ್ಯಾಂಕ್‌ ಖಾತೆಯಿಂದ 49 ಸಾವಿರ ರೂ ಹಣ ಕಟ್‌ ಆಗಿತ್ತು.

ಈ ಬಗ್ಗೆ ಆರೋಪಿಗೆ ತಿಳಿಸಿದಾಗ, ಹಿಂದೆ ಬರಬೇಕಿದ್ದ ಹಾಗೂ ಈಗ ಕಟ್‌ ಆಗಿರುವ ಹಣವೂ ಸೇರಿ ಒಟ್ಟಿಗೇ ಖಾತೆಗೆ ಜಮಾ ಆಗುತ್ತದೆ ಎಂದು ನಂಬಿಸಿದ್ದರು.
ನಂತರ ಜೂ.8ರ ಮಧ್ಯಾಹ್ನ 12-30ರವರೆಗೆ ಹಂತ ಹಂತವಾಗಿ ಒಟ್ಟೂ 2,03,111 ರೂ ಹಣವನ್ನು ಬ್ಯಾಂಕ್‌ ಖಾತೆಯಿಂದ ಅಪರಿಚಿತ ಆರೋಪಿ ಕಳೆದಿದ್ದಾನೆ ಎಂದು ದೂರು ದಾಖಲಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ, ಅಪರಾಧ: 0085/2023, ಐಟಿ ಕಾಯ್ದೆ-2008ರ ಕಲಂ 66(ಡಿ) ಅಡಿಯಲ್ಲಿ ಗಜೇಂದ್ರಗಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here