HomeASSEMBLE ELECTIONಶಿರಹಟ್ಟಿ ಮೀಸಲು ‌ವಿಧಾನಸಭಾ ಕ್ಷೇತ್ರ; ಬಲಗೊಳ್ಳುತ್ತಿರುವ ಪಕ್ಷೇತರರ ಒಕ್ಕೂಟ

ಶಿರಹಟ್ಟಿ ಮೀಸಲು ‌ವಿಧಾನಸಭಾ ಕ್ಷೇತ್ರ; ಬಲಗೊಳ್ಳುತ್ತಿರುವ ಪಕ್ಷೇತರರ ಒಕ್ಕೂಟ

For Dai;y Updates Join Our whatsapp Group

Spread the love

ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿ, ನಾಯಕರಲ್ಲಿ ಆತಂಕ……

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ

ಬಿಜೆಪಿ, ಕಾಂಗ್ರೆಸ್ ಪಕ್ಷದ ಟಿಕೆಟ್ ವಂಚಿತರು, ಅತೃಪ್ತ ಮುಖಂಡರು, ಕಾರ್ಯಕರ್ತರು, ಪಕ್ಷೇತರ ಅಭ್ಯರ್ಥಿ ಪರ ಬೆಂಬಲಕ್ಕೆ ನಿಲ್ಲುವವರ ಸಂಖ್ಯೆ ಕ್ಷೇತ್ರದಲ್ಲಿ ದಿನೇ ದಿನೇ ಹೆಚ್ಚುತ್ತಿರುವುದು ಮತ್ತು ಪಕ್ಷೇತರ ಒಕ್ಕೂಟ ಬಲಗೊಳ್ಳುತ್ತಿರುವುದು ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ಮತ್ತು ನಾಯಕರಲ್ಲಿ ಕೊಂಚ ಚಿಂತೆ, ಆತಂಕವನ್ನು ಸೃಷ್ಟಿಸುತ್ತಿದೆ ಎನ್ನಲಾಗಿದೆ.

ಇದಕ್ಕೆ ಪೂರಕವೆಂಬಂತೆ ಶನಿವಾರ ಲಕ್ಷ್ಮೇಶ್ವರದಲ್ಲಿ ಬಿಜೆಪಿ ಟಿಕೆಟ್ ವಂಚಿತ ಮುಖಂಡ ರಾಜ್ಯ ಬಿಜೆಪಿ ಎಸ್‌ಟಿ ಮೋರ್ಚಾ ಉಪಾಧ್ಯಕ್ಷ ಸಣ್ಣೀರಪ್ಪ ಹಳ್ಳೆಪ್ಪನವರ, ಗದಗ ಜಿಲ್ಲಾ ಎಸ್‌ಸಿ ಮೋರ್ಚಾ ಉಪಾಧ್ಯಕ್ಷ ಪೂರ್ಣಾಜಿ ಖರಾಟೆ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ, ರೈತ ಮುಖಂಡ ಮಹೇಶ ಹೊಗೆಸೊಪ್ಪಿನ, ತಾಲೂಕಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಮಂಜುನಾಥ ಮಾಗಡಿ, ಕರವೇ ಜಿಲ್ಲಾಧ್ಯಕ್ಷ ಶರಣು ಗೋಡಿ ಸೇರಿ ವಿವಿಧ ಪಕ್ಷ, ಸಂಘಟನೆಗಳ ಮುಖಂಡರು ಶನಿವಾರ ಪಕ್ಷೇತರ ಅಭ್ಯರ್ಥಿ ರಾಮಕೃಷ್ಣ ದೊಡ್ಡಮನಿ ಅವರ ಬೆಂಬಲಕ್ಕೆ ನಿಂತು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸುವ ಸಂಕಲ್ಪ ಕೈಗೊಂಡರು.

ಗದಗ ಜಿಲ್ಲಾ ಎಸ್‌ಸಿ ಮೋರ್ಚಾ ಉಪಾಧ್ಯಕ್ಷ ಪೂರ್ಣಾಜಿ ಖರಾಟೆ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರೈತ ಮುಖಂಡ ಮಹೇಶ ಹೊಗೆಸೊಪ್ಪಿನ. ಪಂಚಮಸಾಲಿ ತಾಲೂಕಾ ಅಧ್ಯಕ್ಷ ಮಂಜುನಾಥ ಮಾಗಡಿ ಮಾತನಾಡಿ, ಎರಡು ಪಕ್ಷಗಳ ನಾಯಕರು ಸ್ಥಳೀಯರನ್ನು ನಿರ್ಲಕ್ಷಿಸಿ ತಮ್ಮ ಅಣತಿಯಂತೆ ನಡೆಯುವ ಕ್ಷೇತ್ರದ ಹೊರಗಿನವರಿಗೆ ಟಿಕೆಟ್ ಕೊಡಿಸಿ ಪಕ್ಷದ ನಿಷ್ಠಾವಂತ ಮುಖಂಡರು, ಕಾರ್ಯಕರ್ತರನ್ನು ನಿರ್ಲಕ್ಷಿಸಿದ್ದಾರೆ. ಕ್ಷೇತ್ರದಲ್ಲಿ ಪಕ್ಷೇತರರಾಗಿ ಜಯಬೇರಿ ಭಾರಿಸಿದ ದಿ.ಗೂಳಪ್ಪ ಉಪನಾಳ ಅವರಂತೆ ಈ ಬಾರಿ ಜನಪರ ವ್ಯಕ್ತಿ ರಾಮಕೃಷ್ಣ ದೊಡ್ಡಮನಿ ಅವರ ಗೆಲುವಿಗೆ ಎಲ್ಲರೂ ಕೈ ಜೋಡಿಸೋಣ. ಆ ಮೂಲಕ ಟಿಕೆಟ್ ಮಾರುವ ರಾಷ್ಟ್ರೀಯ ಪಕ್ಷ ಮತ್ತು ನಾಯಕರಿಗೆ ಬುದ್ಧಿ ಕಲಿಸೋಣ ಎಂದರು.


ಈ ವೇಳೆ ಪಕ್ಷೇತರ ಅಭ್ಯರ್ಥಿ ರಾಮಕೃಷ್ಣ ದೊಡ್ಡಮನಿ ಅವರಿಗೆ ಬಿಜೆಪಿ/ಕಾಂಗ್ರೆಸ್ ಪಕ್ಷದ ಮುಖಂಡರಾದ ಮಾಂತೇಶ ಹಳ್ಳೆಪ್ಪನವರ, ನಾಗೇಶ ಅಮರಾಪುರ, ನಾಗರಾಜ ಚಿಂಚಲಿ, ಮಾಬುಸಾಬ ಮುಳಗುಂದ, ಬಸವರಾಜ ವಡವಿ, ಇಸ್ಮಾಯಿಲ್ ಆಡೂರ, ರಮೇಶ ಗೊಜಗೊಜಿ, ಮಂಜು ಮುಶಪ್ಪನವರ, ಮಹೇಶ ಲಮಾಣಿ, ದ್ಯಾಮನಗೌಡ್ರ ಪಾಟೀಲ, ಸಿದ್ದು ಹವಳದ ಸೇರಿದಂತೆ ಶಿರಹಟ್ಟಿ, ಲಕ್ಷ್ಮೇಶ್ವರ ಹಾಗೂ ಮುಂಡರಗಿ ತಾಲೂಕಗಳ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿದರು.

ಮುಖಂಡರಾದ ಶಿವಪ್ರಕಾಶ ಮಹಾಜನಶೆಟ್ಟರ, ಲಕ್ಷ್ಮಣಗೌಡ ಪಾಟೀಲ, ಎಂ.ಎಸ್.ದೊಡ್ಡಗೌಡ್ರ, ವಿರುಪಾಕ್ಷಪ್ಪ ಪಡಗೇರಿ, ಸೋಮಣ್ಣ ಬೆಟಗೇರಿ, ಕೊಟೆಪ್ಪ ವರ್ದಿ, ಯಲ್ಲಪ್ಪ ಸೂರಣಗಿ, ಮಹೇಂದ್ರ ಉಡಚಣ್ಣವರ, ಶಿವನಗೌಡ್ರ ಪಾಟೀಲ, ಮಂಜುನಾಥ ಘಂಟಿ, ಅಬ್ಜಲ್ ರಿತ್ತಿ, ಎಸ್.ವಿ ಬೆಟಗೇರಿ ಸೇರಿ ದೂರದರ್ಶನ ಗುರುತಿನ ಸ್ವಾಭಿಮಾನಿ ಪಕ್ಷೇತರ ಬೆಂಬಲಿತ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!