ಶಿರಹಟ್ಟಿ ಕ್ಷೇತ್ರದ ಸೋತ-ಗೆದ್ದವರ ನಡುವೆ ಜಟಾಪಟಿ; ರೂಮ್ ಗಾಗಿ ಶಾಸಕ-ಡಾ.ಚಂದ್ರು ಲಮಾಣಿ- ಕಾಂಗ್ರೆಸ್ ನಾಯಕಿ ಸುಜಾತ ದೊಡ್ಡಮನಿ ‌ಮಧ್ಯೆ ವಾಗ್ವಾದ….

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಐಬಿ ರೂಮ್ ಗಾಗಿ ಶಾಸಕ ಡಾ.ಚಂದ್ರು ಲಮಾಣಿ ಹಾಗೂ ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿ ಸುಜಾತ ದೊಡ್ಡಮನಿ ಮಧ್ಯೆ ಜಟಾಪಟಿ ನಡೆದ ಘಟನೆ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಗುರುವಾರ ಸಂಜೆ ನಡೆದಿದೆ.

ಮುಂಡರಗಿ ಪಟ್ಟಣದ ಪಿಡಬ್ಯ್ಲೂಡಿ ಇಲಾಖೆಗೆ ಸೇರಿದ ಐಬಿಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕಿ ಸುಜಾತ ದೊಡ್ಡಮನಿ, ತಮ್ಮ ಕಾರ್ಯಕರ್ತರ ಜೊತೆಗೆ ಸೇರಿದ್ದರು.

ಆಗ ಹಠಾತ್ ಎಂಟ್ರಿಯಾದ ಶಾಸಕ ಡಾ. ಚಂದ್ರು ಲಮಾಣಿ ಹಾಗೂ ಬಿಜೆಪಿ ಮುಖಂಡರು, ಇದು ನನಗೆ ಸೇರಿದ ರೂಮ್. ಇಲ್ಲಿಂದ ನೀವು ಹೊರಗೆ ಹೋಗಿ ಎಂದು ಹೇಳಿದ್ದಾರೆ. ಇದರಿಂದಾಗಿ ಕೆರಳಿದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಸುಜಾತ ದೊಡ್ಡಮನಿ ಹಾಗೂ ಬೆಂಬಲಿಗರು ಶಾಸಕ ಡಾ.ಚಂದ್ರು ಲಮಾಣಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಮಾತಿಗೆ ಮಾತು ಬೆಳೆದು ಒಂದು ಹಂತದಲ್ಲಿ ಸಹನೆ ಕಳೆದುಕೊಂಡ ಶಾಸಕ ಡಾ.ಚಂದ್ರು ಲಮಾಣಿ ನೀವು ವಸೂಲಿಗಾಗಿ ಬಂದಿದ್ದೀರಿ ಎಂದು ಜರಿದಿದ್ದಾರೆ. ಇದರಿಂದ ತೀವ್ರ ಆಕ್ರೋಶಗೊಂಡ ಕಾಂಗ್ರೆಸ್ ನಾಯಕಿ ಸುಜಾತ ದೊಡ್ಡಮನಿ ಹಾಗೂ ಬೆಂಬಲಿಗರು ಶಾಸಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಜಟಾಪಟಿ ನಡೆದ ದೃಶ್ಯ ಇಲ್ಲಿದೆ ನೋಡಿ……


Spread the love

LEAVE A REPLY

Please enter your comment!
Please enter your name here