ವಿಜಯಸಾಕ್ಷಿ ಸುದ್ದಿ, ಗದಗ
ತಮ್ಮ ಲಾಭಕ್ಕಾಗಿ ಕಲ್ಯಾಣಿ ನೈಟ್ ಅಂಕಿ -ಸಂಖ್ಯೆಗಳ ಮೇಲೆ ಓ.ಸಿ ಜೂಜಾಟ ಆಡಿಸುತ್ತಿದ್ದ ಇಬ್ಬರು ಅಕ್ಕಸಾಲಿಗರನ್ನು ಶಹರ ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಮಾಬುಸುಭಾನಿ ಕಟ್ಟಿ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಆರೋಪಿಗಳಾದ ಜೋಡಮಾರುತಿ ಗುಡಿ ಬಳಿಯ ಕಿಲ್ಲಾ ಓಣಿಯ ರಮಾಕಾಂತ ತಂದೆ ಪರಶುರಾಮ ಮಿಸ್ಕಿನ್ ಹಾಗೂ ಇನ್ನೊಬ್ಬ ಹುಡ್ಕೋ ಕಾಲೋನಿಯ ಅಮರನಾಥ ತಂದೆ ಸುನೀಲ ಮಿಸ್ಕಿನ್ ತಮ್ಮ ಲಾಭಕ್ಕಾಗಿ ಕಲ್ಯಾಣಿ ನೈಟ್ ಅಂಕಿ ಸಂಖ್ಯೆಗಳ ಮೇಲೆ ಓ. ಸಿ ನಂಬರ್ ಗೆ ಹಣ ಹಚ್ಚಿದರೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವುದಾಗಿ ಹೇಳಿ ಜನರಿಂದ ಹಣ ಪಡೆದುಕೊಂಡು ಜೂಜಾಟ ಆಡಿಸುತ್ತಿದ್ದಾಗ ಶಹರ ಠಾಣೆಯ ಪಿಎಸ್ಐ ಜಿ.ಟಿ ಜಕ್ಕಲಿ ರೇಡ್ ಮಾಡಿ ಬಂಧಿಸಿದ್ದಾರೆ.
ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ 0112/2023 Karnataka police (amendment)Act,2021(U/s-78(3) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.



