ವಿದ್ಯಾರ್ಥಿಗಳ‌‌ ಬಿಸಿಯೂಟದ ಅಕ್ಕಿ, ತೊಗರಿಬೆಳೆ ಕದ್ದೋಯ್ದ ಖದೀಮರು…

0
Spread the love

Advertisement

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ವಿದ್ಯಾರ್ಥಿಗಳ ಬಿಸಿಯೂಟದ ಸಾಮಗ್ರಿಗಳಿಗೆ ಕನ್ನ್ ಹಾಕಿದ ಖದೀಮರು, ಸಾವಿರಾರು ರೂ. ಮೌಲ್ಯದ ಅಕ್ಕಿ ಹಾಗೂ ತೊಗರಿಬೆಳೆ ಕಳ್ಳತನ ಮಾಡಿಕೊಂಡು ಪರಾರಿಯಾದ ಘಟನೆ ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದ ಶ್ರೀಮತಿ ಎನ್ ವಿ ಅಂಗಡಿ ಸರಕಾರಿ ಪ್ರೌಢಶಾಲೆಯಲ್ಲಿ ಅಡುಗೆ ಕೋಣೆಯ ಕೀಲಿ ಮುರಿದು ಒಳಗೆ ಇದ್ದ 4900 ರೂಪಾಯಿ ಮೌಲ್ಯದ 50 ಕೇಜಿ ತೊಗರಿಬೆಳೆ, 1700ರೂಪಾಯಿ ಮೌಲ್ಯದ ಅಕ್ಕಿ ಹಾಗೂ 7170 ರೂಪಾಯಿ ಮೌಲ್ಯದ ಗ್ಯಾಸ್‌ ತುಂಬಿಸ ಸಿಲಿಂಡರ್ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಈ ಘಟನೆ ಆಗಸ್ಟ್ 3 ರಿಂದ ಆಗಸ್ಟ್ 4ರ ಬೆಳಗಿನ 6.30 ರ ನಡುವಿನ ಅವಧಿಯಲ್ಲಿ ನಡೆದಿದ್ದು, ಶಾಲೆಯ ಹಿರಿಯ ಶಿಕ್ಷಕಿಯಾಗಿರುವ ಶ್ರೀದೇವಿ ರಾಚಯ್ಯ ಹಿರೇಮಠ ಅವರು ಶಿರಹಟ್ಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಕುರಿತು 0154/2023 IPC 1860(U/u-454,457,380 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here