ಲಕ್ಷ್ಮೇಶ್ವರದಲ್ಲಿ ಭಾರಿ ಮಳೆ; ಸಿಡಿಲು ಬಡಿದು ಗೋಪುರಕ್ಕೆ ಧಕ್ಕೆ, ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ವಾಹನ ಸವಾರರ ದುಸ್ಸಾಹಸ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

Advertisement

ಶುಕ್ರವಾರ ತಾಲೂಕಿನಲ್ಲಿ ಗುಡುಗಿನ ಅಬ್ಬರದ ಮಳೆ ಹಲವು ಅವಾಂತರಗಳನ್ನು ಸೃಷ್ಟಿ ಮಾಡಿದೆ.

ತಾಲೂಕಿನ ಶಿಗ್ಲಿ ಗ್ರಾಮದ ಬನಶಂಕರಿ ದೇವಿಯ ದೇವಸ್ಥಾನದ ಗೋಪುರಕ್ಕೆ ಸಿಡಿಲು ಬಡಿದ ಪರಿಣಾಮವಾಗಿ ಅಪಾರ ಪ್ರಮಾಣದ ಹಾನಿಯಾಗಿದೆ. ದೇವಸ್ಥಾನದಲ್ಲಿ ನಿಂತಿದ್ದ ಹತ್ತಾರು ಜನರಿಗೆ ಯಾವುದೇ ತೊಂದರೆ ಆಗಿಲ್ಲ.

ಎಂಟು ತಿಂಗಳ ಹಿಂದಷ್ಟೇ ಲಕ್ಷಾಂತರ ರೂ. ವೆಚ್ಚದಲ್ಲಿ ದೇವಸ್ಥಾನ ಲೋಕಾರ್ಪಣೆಗೊಂಡಿತ್ತು. ನವರಾತ್ರಿಯ ಸಂದರ್ಭದಲ್ಲಿ ಗೋಪುರಕ್ಕೆ ಬಡಿದ ಸಿಡಿಲು, ತಾಯಿ ಬನಶಂಕರಿ ಭಕ್ತರ ಜೀವ ಕಾಪಾಡಿ ತನ್ನ ಗೋಪುರಕ್ಕೆ ಧಕ್ಕೆ ಮಾಡಿಕೊಂಡಿದ್ದಾಳೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ.

ಭಾರಿ ಮಳೆಯಿಂದಾಗಿ ದೊಡ್ಡೂರು ಗ್ರಾಮದ ಬಳಿ ಇರುವ ಹಳ್ಳ ತುಂಬಿ ಹರಿಯುತ್ತದೆ. ಇದರಲ್ಲಿ ಕೆಲ ವಾಹನ ಸವಾರರು ಪ್ರಾಣದ ಹಂಗು ಲೆಕ್ಕಸದೇ ಅದರಲ್ಲಿ ವಾಹನ ಚಲಾಯಿಸುವ ಮೂಲಕ ದುಸ್ಸಾಹಸ ಮೆರೆದರು.


Spread the love

LEAVE A REPLY

Please enter your comment!
Please enter your name here