ಲಕ್ಷ್ಮೇಶ್ವರ ಪೊಲೀಸರ ಕಾರ್ಯಾಚರಣೆ; ಇಬ್ಬರು ಸರಗಳ್ಳರ ಬಂಧನ

0
Spread the love

ಎರಡು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ

Advertisement

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಪಟ್ಟಣದ ಪೊಲೀಸರ ಕಾರ್ಯಾಚರಣೆಯಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಳ್ಳರನ್ನು ಬಂಧಿಸಿ ಅವರಿಂದ ಬಂಗಾರ ಮತ್ತು ದ್ವಿಚಕ್ರವಾಹನ ವಶಪಡಿಸಿಕೊಂಡು ಕಳ್ಳರನ್ನು ಕಸ್ಟಡಿಗೆ ಒಪ್ಪಿಸಿದ್ದಾರೆ.

ಪಟ್ಟಣದ ಮೈಲಾರಲಿಂಗೇಶ್ವರ ದೇವಸ್ಥಾನದ ಹತ್ತಿರ ಸರಾಫ್ ಬಜಾರದಲ್ಲಿ ಕಳೆದ ಅ.30ರಂದು ವೃದ್ಧೆಯೋರ್ವರು ತಮ್ಮ ಮನೆಯ ಗೇಟ್ ತೆಗೆಯುವಾಗ ಮೋಟರ್ ಸೈಕಲ್ ಮೇಲೆ ಬಂದು ಕೊರಳಲ್ಲಿನ ಬಂಗಾರದ ಚೈನ್ ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಕಳ್ಳರ ಜಾಡು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ರವಿ ಸುರೇಶ ಭೋಸಲೆ(25) ಮತ್ತು ಮಂಜು ಶಂಕ್ರಪ್ಪ ಅರವಿಂದ ಭೋಸಲೆ(26) ಎಂದು ಗುರುತಿಸಲಾಗಿದೆ.

ಪ್ರಕರಣಗಳನ್ನು ಪತ್ತೆ ಹಚ್ಚಿ ಸುಮಾರು 2ಲಕ್ಷ ರೂ. ಬೆಲೆಬಾಳುವ 40ಗ್ರಾಂ. ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ 25ಸಾವಿರ ರೂ. ಕಿಮ್ಮತ್ತಿನ ಮೋಟರ್ ಸೈಕಲ್ ವಶಪಡಿಸಿಕೊಂಡಿದ್ದಾರೆ.

ಸಿಪಿಐ ವಿಕಾಸ ಲಮಾಣಿ, ಪಿಎಸ್‌ಐ ಪ್ರಕಾಶ.ಡಿ, ವಿ.ಜಿ ಪವಾರ, ಎಎಸ್‌ಐ ಜಿ.ಎಂ. ಬೂದಿಹಾಳ, ಸಿಬ್ಬಂದಿಗಳಾದ ಆನಂದಸಿಂಗ್ ದೊಡ್ಡಮನಿ, ಆರ್.ಎಸ್. ಯರಗಟ್ಟಿ, ಎಸ್.ಸಿ. ಕಪ್ಪತ್ತನವರ, ಎಂ.ಎ. ಶೇಖ, ಮೆಹಬೂಬ್ ವಡ್ಡಟ್ಟಿ, ಎಚ್.ಐ ಕಲ್ಲಣ್ಣವರ, ಡಿ.ಎಸ್. ನದಾಫ್, ಎಸ್.ಸಿ. ಕೊರಡೂರ, ಜಿ.ಆರ್. ಗ್ರಾಮಪುರೋಹಿತ, ಎ.ಆರ್. ಕಮ್ಮಾರ, ಎಸ್.ಎಫ್. ತಡಸಿ, ಸಿ.ಎಸ್. ಮಠಪತಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಡಿವಾಯ್‌ಎಸ್‌ಪಿ ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here