ಕುಟುಂಬ ಕಲಹ; ಹೆತ್ತ ತಂದೆಯನ್ನೇ ಹತ್ಯೆ ಮಾಡಿದ ಪುತ್ರ

0
Spread the love

ಕೊಡಲಿಯಿಂದ ಹೊಡೆದು ಕೊಲೆ……

Advertisement

ವಿಜಯಸಾಕ್ಷಿ ಸುದ್ದಿ, ನರಗುಂದ

ಕುಟುಂಬ ಕಲಹದಿಂದಾಗಿ ಉಂಟಾಗಿದ್ದ ಜಗಳ ವಿಕೋಪಕ್ಕೆ ಹೋಗಿ ತಂದೆಯ ಹತ್ಯೆಯಲ್ಲಿ ಅಂತ್ಯವಾದ ಘಟನೆ ಜರುಗಿದೆ.

ತಾಲೂಕಿನ ಹದ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಗನೇ ಹೆತ್ತ ತಂದೆಯನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ.

ಆರೋಪಿ ಮೌಲಾಸಾಬ ಕಾಲೇಖಾನ್ ಎಂಬಾತ ತನ್ನ ತಂದೆ ಮಲಕಸಾಬ ಕಾಲೇಖಾನ (52)ನನ್ನು ಕೊಲೆ ಮಾಡಿದ್ದಾನೆ.

ಮೃತ ಮಲಕಸಾಬ, ಕುಡಿದು ಬಂದು ರಸ್ತೆಯಲ್ಲಿ ನಿಂತು ತಾಯಿಗೆ ಅವಾಚ್ಯವಾಗಿ ಬೈದಾಡುತ್ತಿದ್ದ. ರಸ್ತೆಯಲ್ಲಿ ನಿಂತು ಬೈಯಬೇಡ, ಮಾನ ಮರ್ಯಾದೆ ತಗೆಬೇಡ ಎಂದು ಎಷ್ಟೇ ಹೇಳಿದರೂ ಕೇಳದಿದ್ದಾಗ, ಕೋಪಗೊಂಡ ಆರೋಪಿ ಮೌಲಾಸಾಬ ಕೊಡಲಿಯಿಂದ ತಲೆಗೆ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಅಸ್ವಸ್ಥಗೊಂಡ ಮಲಕಸಾಬನನ್ನು ನರಗುಂದ ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಹೋಗುವಾಗ ಮೃತಪಟ್ಟಿದ್ದಾನೆ.

ಘಟನೆಯ ನಂತರ ಆರೋಪಿ ಮೌಲಾಸಾಬನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದು, 19/2023, 302, 504 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here