ಮಹಿಳೆ ಭೀಕರ ಕೊಲೆ; ಕೊಲೆಗೈದು ಕುಡುಗೋಲು ಸಮೇತ ಠಾಣೆಗೆ ಶರಣಾದ ಆರೋಪಿ!

0
Spread the love

ಜಮೀನೊಂದರಲ್ಲಿ ಘಟನೆ

Advertisement

ವಿಜಯಸಾಕ್ಷಿ ಸುದ್ದಿ, ನರಗುಂದ

ವ್ಯಕ್ತಿಯೊಬ್ಬ ಮಹಿಳೆಯನ್ನು ಭೀಕರವಾಗಿ ಕೊಲೆಗೈದು ಠಾಣೆಗೆ ಶರಣಾದ ಘಟನೆ ನಿನ್ನೆ ಸಂಜೆ ಜರುಗಿದೆ.

ಆರೋಪಿ ಬಸಪ್ಪ ನಾಗಪ್ಪ ಚಂದ್ರ ಎಂಬಾತನೇ ಮಹಿಳೆಯೊಬ್ಬಳನ್ನು ಕೊಲೆಗೈದು ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.

ತಾಲೂಕಿನ ಕುರುಗೋವಿನಕೊಪ್ಪ ಗ್ರಾಮದ ಜಮೀನೊಂದರಲ್ಲಿ ಈ ಘಟನೆ ಜರುಗಿದ್ದು, ಕಸ್ತೂರಿ ಮಹಾದೇವಪ್ಪ ತಳವಾರ (38) ಕೊಲೆಗೀಡಾದ ಮಹಿಳೆ ಎಂದು ಗುರುತಿಸಲಾಗಿದೆ.

ಆರೋಪಿ ಬಸಪ್ಪ, ಕಸ್ತೂರಿಯನ್ನು ಕುಡುಗೋಲನಿಂದ ತಲೆಗೆ, ಕತ್ತು ಹಾಗೂ ಕೈಗೆ ಹೊಡೆದು ಕೊಲೆ ಮಾಡಿದ್ದಾನೆ.

ವಿಷಯ ಗೊತ್ತಾಗಿ ಪತಿ ಹಾಗೂ ಇತರರು ಸ್ಥಳಕ್ಕೆ ಹೋಗಿ ನೋಡಿದಾಗ ಮಹಿಳೆ ಕಸ್ತೂರಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ನಂತರ ಪೊಲೀಸ್ ಠಾಣೆಗೆ ಬಂದಾಗ ಆರೋಪಿ ಬಸಪ್ಪ ಕುಡುಗೋಲು ಸಮೇತ ಠಾಣೆಗೆ ಶರಣಾದ ವಿಷಯ ಬೆಳಕಿಗೆ ಬಂದಿದೆ.

ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ 195/2022 ಕಲಂ 302 ಐಪಿಸಿ,ಕಲಂ 3[2] [V] Sc-sc act ಅಡಿಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here