ವ್ಯಾನಿಟಿ ಬ್ಯಾಗ್‌ನಲ್ಲಿಟ್ಟಿದ್ದ 61,500 ರೂ ಮೌಲ್ಯದ ನೆಕ್ಲೆಸ್‌ ಕಳ್ಳತನ

0
Spread the love

ಠಾಣೆಗೆ ದೂರು ನೀಡಿದ ಪಿಡಿಒ…..

Advertisement

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಬಸ್‌ ಏರುವಾಗ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ 61,500 ರೂ ಬೆಲೆಬಾಳುವ ಬಂಗಾರದ ನೆಕ್ಲೆಸ್‌ನ್ನು ಕಳ್ಳತನ ಮಾಡಿರುವ ಬಗ್ಗೆ ಲಕ್ಷ್ಮೇಶ್ವರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಕುರಿತು ಲಕ್ಷ್ಮೇಶ್ವರ ತಾಲೂಕಿನ ಪುಟಗಾಂವ ಬಡ್ನಿ ಗ್ರಾಮದ ಸುಮಾ ರವಿ ಕೊರಕನವರ ಪರವಾಗಿ ಅವರ ಪತಿ ಪಿಡಿಒ ರವಿ ಸಿದ್ದಪ್ಪ ಕೊರಕನವರ ದೂರು ನೀಡಿದ್ದಾರೆ.

ಮೇ.31ರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಲಕ್ಷ್ಮೇಶ್ವರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಹಾವೇರಿ ಕಡೆಗೆ ಹೋಗುವ ಬಸ್‌ ಹತ್ತುತ್ತಿದ್ದರು.
ಈ ಸಮಯದಲ್ಲಿ ಸುಮಾ ಅವರ ಬ್ಯಾಗಿನ ಜಿಪ್‌ ತೆರೆದು, ಅದರಲ್ಲಿದ್ದ 14 ಗ್ರಾಂ 390 ಮಿಲಿಗ್ರಾಂ ತೂಕದ 61,500 ರೂ ಬೆಲೆಬಾಳುವ ಬಂಗಾರದ ನೆಕ್ಲೆಸನ್ನು ಯಾರೋ ಕಳ್ಳರು ಕಳ್ಳತನ ಮಾಡಿದ್ದಾರೆಂದು ತಿಳಿಸಿದ್ದಾರೆ.

ಅಪರಾಧ 0071/2023, ಐಪಿಸಿ 1860ರ ಕಲಂ 379ರ ಅಡಿಯಲ್ಲಿ ಲಕ್ಷ್ಮೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here