ಶಹರ ಪೊಲೀಸರ ಕಾರ್ಯಾಚರಣೆ; ಬೈಕ್ ಕಳ್ಳ, ಎಮ್‌ಟಿಆರ್ ಏಜೆಂಟ್‌ನ ಬಂಧನ

0
Spread the love

ಎರಡು ಬೈಕ್ ಜಪ್ತಿ….

Advertisement

ವಿಜಯಸಾಕ್ಷಿ ಸುದ್ದಿ, ಗದಗ

ಮನೆ ಮುಂದೆ ನಿಲ್ಲಿಸಿದ್ದ ಡಿಯೋ ಕಂಪನಿಯ ಸ್ಕೂಟಿ ಹಾಗೂ ಬೈಕ್ ಕದ್ದ ಆರೋಪದಲ್ಲಿ ಎಮ್‌ಟಿಆರ್ ಮಸಾಲಾ ಪದಾರ್ಥಗಳ ಏಜೆನ್ಸಿ ಹೊಂದಿದ ಆರೋಪಿಯೊಬ್ಬನನ್ನು ಶಹರ ಪೊಲೀಸರ ತಂಡ ಬಂಧಿಸಿದೆ. ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಬಂಧಿತನನ್ನು ಎಸ್.ಎಮ್ ಕೃಷ್ಣ ನಗರದ ಗಣೇಶ ತಂದೆ ಕಾಶಪ್ಪ ಹೊಂಬಳ ಎಂದು ಹೇಳಿದ್ದಾರೆ.

ಇದನ್ನೂ ಓದಿ ಗದಗ ಶಹರ ಪೊಲೀಸರ ಕಾರ್ಯಾಚರಣೆ; ಎಸ್.ಎಮ್ ಕೃಷ್ಣ ನಗರದ ಉಸ್ತಾದ್ ಬಂಧನ

ಬಂಧಿತನಿಂದ ಕಳಸಾಪೂರ ರಸ್ತೆಯ ಇಂಡೋರ್ ಸ್ಟೇಡಿಯಂ ಬಳಿ ಕದ್ದಿದ್ದ ಡಿಯೋ ಸ್ಕೂಟಿ ಹಾಗೂ ಕೊಪ್ಪಳ ಶಹರದಲ್ಲಿ ಕಳ್ಳತನವಾಗಿದ್ದ ಹೀರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರು ಸೈಕಲ್ ವಶಪಡಿಸಿಕೊಳ್ಳಲಾಗಿದೆ.

ಎಸ್ಪಿ ಬಿ. ಎಸ್ . ನೇಮಗೌಡ, ಡಿವೈಎಸ್ಪಿ ಮಡಿವಾಳಪ್ಪ ಸಂಕದ ಅವರ ಮಾರ್ಗದರ್ಶನದಲ್ಲಿ ಶಹರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಡಿ.ಬಿ.ಪಾಟೀಲ, ಪಿಎಸ್‌ಐ ಜಿ.ಟಿ ಜಕ್ಕಲಿ, ಎಎಸ್‌ಐ ವಾಯ್. ಬಿ ಪಾಟೀಲ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಸ್.ಎಸ್ ಮಾವಿನಕಾಯಿ, ಯು.ಎಫ್ ಸುಣಗಾರ, ಕೆ.ಡಿ ಜಮಾದಾರ, ಪಿ.ಬಿ ಮೂಲಿಮನಿ, ಪ್ರವೀಣ ಕಲ್ಲೂರ, ಪಿ.ಎ. ಭರಮಗೌಡರ್ ಹಾಗೂ ವೀರಪ್ಪ ಗೌಡನಾಯ್ಕರ್ ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ತಂಡದ ಕಾರ್ಯಾಚರಣೆಗೆ ಎಸ್ಪಿ ಬಿ.ಎಸ್ ನೇಮಗೌಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here