ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ
ಕಳೆದ 2022 ಡಿಸೆಂಬರ್ 10 ರಂದು ತಾಲೂಕಿನ ಹಂಗನಕಟ್ಟಿ ಗ್ರಾಮದ ಮಂಜಪ್ಪ ನೀಲಪ್ಪ ನಾಯಕವಾಡಿ ಎಂಬುವರು ಜಲ್ಲಿಗೇರಿ ಹದ್ದಿಯ ತೋಟದಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರನ್ನು 15-11-2022 ರಂದು ರಾತ್ರಿ ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಗದಗ ಡಿಎಸ್ಪಿ ಎಸ್ ಬಿ ಸಂಕದ, ಶಿರಹಟ್ಟಿ ಸಿಪಿಐ ವಿಕಾಸ್ ಲಮಾಣಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಟ್ರ್ಯಾಕ್ಟರ್ ಕಳ್ಳನನ್ನು ಬಂಧಿಸಿದ್ದಾರೆ.
ಬಂಧಿತನನ್ನು ಹಂಗನಕಟ್ಟಿ ಗ್ರಾಮದ ಮಹಾಲಿಂಗೇಶ್ ಅಲಿಯಾಸ್ ಮಹಾಲಿಂಗಪ್ಪ ತಂದೆ ರಾಮಪ್ಪ ಕಿತ್ತಲಿ ಎಂದು ಗುರುತಿಸಲಾಗಿದೆ. ಬಂಧಿತನಿಂದ ಟ್ರ್ಯಾಕ್ಟರ್ನ್ನು ವಶಪಡಿಸಿಕೊಂಡಿದ್ದಾರೆ.
ಪಿಎಸ್ಐ ಈರಪ್ಪ ರಿತ್ತಿ ಹಾಗೂ ವಿಜಯಕುಮಾರ ತಳವಾರ ಮತ್ತು ಸಿಬ್ಬಂದಿಗಳಾದ ಮಾಬು ವಡ್ಡಟ್ಟಿ, ಹನುಮಂತ ದೊಡ್ಡಮನಿ, ಆರ್.ಎಚ್.ಮುಲ್ಲಾ, ಸೋಮು ರಾಮಗಿರಿ, ಟಿ ಎನ್ ಕಾರಭಾರಿ, ರಾಜೇಶ ವಿರಾಪೂರ, ಫಕ್ಕೀರೇಶ ಲಮಾಣಿ, ಗಂಗಾದರ ಕರಿಲಿಂಗಣ್ಣವರ ಒಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.