ಬಂಧಿತರು ಒಂದೇ ಗ್ರಾಮದವರು.…..
Advertisement
ವಿಜಯಸಾಕ್ಷಿ ಸುದ್ದಿ, ಗದಗ
ಜಿಲ್ಲೆಯ ಶಿರಹಟ್ಟಿ ತಾಲೂಕಿನ ನಾದಿಗಟ್ಟಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಆರು ಜನರ ತಂಡವನ್ನು ಶಿರಹಟ್ಟಿ ಪೊಲೀಸರು ಬಂಧಿಸಿದ್ದಾರೆ.
ಪಿಎಸ್ಐ ಈರಪ್ಪ ರಿತ್ತಿ ನೇತೃತ್ವದಲ್ಲಿ ಸಿಬ್ಬಂದಿ ವರ್ಗ ಈ ದಾಳಿ ಮಾಡಿತ್ತು.
ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ
ಹನಮಂತ ಸಣ್ಣಸಿದ್ದಪ್ಪ ವಡ್ಡರ, ಫಕ್ಕೀರೇಶ್ ಮುದಕಪ್ಪ ವಡ್ಡರ ಅಲಿಯಾಸ್ ಬಸಾಪೂರ, ಹನಮಂತ ಮುದಕಪ್ಪ ವಡ್ಡರ ಅಲಿಯಾಸ್ ಬಸಾಪೂರ, ಮಂಜಪ್ಪ ಗುರಪ್ಪ ವಡ್ಡರ, ಹನಮಂತಪ್ಪ ದಾನಪ್ಪ ಒಡ್ಡರ ಹಾಗೂ ಸಾದೇವಪ್ಪ ಗಿಡ್ಡಪ್ಪ ಒಡ್ಡರ ಬಂಧಿತರು.
ಬಂಧಿತರಿಂದ ನಗದು 1730 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಕರ್ನಾಟಕ ಪೊಲೀಸ್ ಆ್ಯಕ್ಟ್ 1963(U/s-87) 10/2023 ರಂತೆ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.