ಪೊಲೀಸರ ಕಾರ್ಯಾಚರಣೆ…
ಗದಗ:- ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್- ಬಾಹರ್ ಜೂಜಾಟದಲ್ಲಿ ತೊಡಗಿಸಿಕೊಂಡಿದ್ದ ಗುಂಪೊಂದರ ಮೇಲೆ ದಾಳಿ ನಡೆಸಿರುವ ಪೊಲೀಸರು ಒಬ್ಬ ಇಂಜಿನಿಯರ್ ಸೇರಿದಂತೆ ಒಂಬತ್ತು ಜನರನ್ನು ಬಂಧಿಸಿರುವ ಘಟನೆ ತಾಲೂಕಿನ ಕೋಟಮುಚಗಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸಂತೆಬಯಲಿನ ಹತ್ತಿರ ಇರುವ ದುರುಗಮ್ಮ ಗುಡಿ ಹತ್ತಿರದ ಸಾರ್ವಜನಿಕ ಬಯಲು ಜಾಗದಲ್ಲಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್- ಬಾಹರ್ ಜೂಜಾಟದಲ್ಲಿ ತೊಡಗಿಸಿಕೊಂಡಿದ್ದ ಬೆಟಗೇರಿಯ ಪ್ರಕಾಶ್ ಬಸವಣ್ಣೆಪ್ಪ ಮಾನೆ, ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮ ನಿವಾಸಿ ತಾಯಪ್ಪ ಪರಸಪ್ಪ ಕೆಂಗಾರ್, ಕೋಟುಮಚಗಿ ನಿವಾಸಿಗಳಾದ ಶೇಖಪ್ಪ ಶಿವಪ್ಪ ರಮಾಣಿ, ಮುತ್ತಣ್ಣ ಮಲ್ಲಪ್ಪ ರಮಾಣಿ, ಶರಣಪ್ಪ ಅಂದಪ್ಪ ಬೇವಿನಕಟ್ಟೆ, ಶಂಕರಪ್ಪ ಕರಿಯಪ್ಪ ವಡ್ಡರ್, ಶಿವಪ್ಪ ಬಸಪ್ಪ ವಡ್ಡರ್, ಈರಪ್ಪ ಹುಚ್ಚಪ್ಪ ಬೆಂಡಿಹಾಳ್ ಹಾಗೂ ಮುದಿಯಪ್ಪ ರಾಮಪ್ಪ ಕಮ್ಮಾರ್ ಎಂಬುವವರನ್ನು ಬಂಧಿಸಲಾಗಿದೆ.
ಆರೋಪಿಗಳಿಂದ ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ರೂ. 9,520ನಗದು ಹಾಗೂ ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ ಅನ್ವಯ ಅಪರಾಧ ಸಂಖ್ಯೆ: 0313/2023ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರೆಸಿದ್ದಾರೆ.