ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿರುವ ಅಬಕಾರಿ ಪೊಲೀಸರು…….
ವಿಜಯಸಾಕ್ಷಿ ಸುದ್ದಿ, ಗದಗ
ಗೋವಾ ರಾಜ್ಯದ ಮದ್ಯ ಸಾಗಾಟ ಮಾಡುತ್ತಿದ್ದ ಫೋಟೋಗ್ರಾಫರ್ ಒಬ್ಬನನ್ನು ಅಬಕಾರಿ ಪೊಲೀಸರು ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ.
ಬೆಳಧಡಿ ತಾಂಡಾದ ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿರುವ ಕೇಶವ ಗುರುನಾಥ ಚವ್ಹಾಣ ಬಂಧಿತ ಆರೋಪಿ.
ಗುರುವಾರ ರಾತ್ರಿ ಗದಗನಿಂದ ನಾಗಾವಿ ಗ್ರಾಮದ ಕಡೆ ಗೋವಾದ ಎಮ್ ಸಿ ಡುವೆಲ್ಸ್ ನಂ.1 ವಿಸ್ಕಿ, ಗೋಲ್ಡನ್ ಏಸ್ ಬ್ಲ್ಯೂ ಫೈನ್ ವಿಸ್ಕಿ ಹಾಗೂ ರಾಯಲ್ ಸ್ಟ್ಯಾಗ್ ರಿಸರ್ವ್ ವಿಸ್ಕಿ ಸೇರಿದಂತೆ 12,960 ರೂ ಮೌಲ್ಯದ ಮದ್ಯ, ಹಾಗೂ ಬೈಕ್ ಬಂಧಿತನಿಂದ ಜಪ್ತಿ ಮಾಡಲಾಗಿದೆ.
ಖಚಿತ ಮಾಹಿತಿ ಆಧರಿಸಿ ಅಬಕಾರಿ ನಿರೀಕ್ಷಕರಾದ ನೇತ್ರಾ ಉಪ್ಪಾರ, ಸಿಬ್ಬಂದಿಗಳಾದ ಮಂಜುನಾಥಗೌಡ ರಾಯನಗೌಡ, ಗಿರೀಶ್ ಮುದರಡ್ಡಿ, ನಜೀರ್ ಖುದಾವಂದ, ಸಂತೋಷ ನೆಲ್ಲೂರು ಹಾಗೂ ರಮೇಶ್ ಬೆಣಗಿ ದಾಳಿ ಮಾಡಿದ್ದರು.
ಈ ಕುರಿತು 1965ರ ಕಲಂ 11,14 ಮತ್ತು 15 ಹಾಗೂ ಕರ್ನಾಟಕ ಅಬಕಾರಿ ನಿಯಮಾವಳಿ 1985ರ ನಿಯಮ 3ರ ಉಲ್ಲಂಘನೆಯಾಗಿದ್ದು, 1985ರ ಕಲಂ 32(1), 38 (ಎ) ಮತ್ತು 43ರ ಅನ್ವಯ ಪ್ರಕರಣ ದಾಖಲಾಗಿದೆ.