ಚುನಾವಣಾ ಕರ್ತವ್ಯದಲ್ಲಿ ನಿರ್ಲಕ್ಷ್ಯ ಆರೋಪ; ರಿಟರ್ನಿಂಗ್ ಅಧಿಕಾರಿ ವಿರುದ್ಧ ಎಫ್ ಐಆರ್ ದಾಖಲು

0
Spread the love

ಡಿಸಿ ವೈಶಾಲಿ ಎಮ್.ಎಲ್ ಸೂಚನೆ ಮೇರೆಗೆ ಪ್ರಕರಣ…….

Advertisement

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ಶಿರಹಟ್ಟಿ ಮೀಸಲು ವಿಧಾನಸಭಾ ಕ್ಷೇತ್ರದ ರಿಟರ್ನಿಂಗ್‌ ಅಧಿಕಾರಿಯಾಗಿ ನೇಮಿಸಿದ್ದ ಬೆಂಗಳೂರಿನ ಅಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯದರ್ಶಿಯೊಬ್ಬರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್ ಅವರ ಸೂಚನೆ ಮೇರೆಗೆ ಶಹರ ಪೊಲೀಸ್ ಠಾಣೆಯಲ್ಲಿ ಪ್ರಜಾ ಪ್ರಾತಿನಿಧಿಕ ಕಾಯ್ದೆ 1951ರ ಕಲಂ134 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಮೊದಲು ಜಿಲ್ಲಾ ಪಂಚಾಯತಿಯ ಗ್ರಾಮೀಣಾಭಿವೃದ್ಧಿ ಕೋಶದ
ಯೋಜನಾ  ನಿರ್ದೇಶಕರನ್ನು ನಿಯೋಜಿಸಲಾಗಿತ್ತು.

ಆದರೆ,  ಪ್ರಸ್ತುತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಯು ಸ್ಥಳೀಯ ವಾಸಿಯಾಗಿರುವುದರಿಂದ, ಸರ್ಕಾರವು ಉಲ್ಲೇಖಿತ ಅಧಿಸೂಚನೆಯನ್ವಯ ಅವರನ್ನು ವರ್ಗಾವಣೆಗೊಳಿಸಿ, ಸದರಿ ಹುದ್ದೆಗೆ ಚಿದಾನಂದ, ಉಪ ಕಾರ್ಯದರ್ಶಿ-೩, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇವರನ್ನು ನಿಯೋಜಿಸಿದ್ದರು.

ಆದರೆ, ಈ ಅಧಿಕಾರಿಯು, ಈವರೆಗೂ ಸದರಿ ಹುದ್ದೆಗೆ ವರದಿ ಮಾಡಿಕೊಂಡಿರುವುದಿಲ್ಲ. ಈ ಕುರಿತಂತೆ ಕಾರ್ಯಾಲಯದ ಉಲ್ಲೇಖದನ್ವಯ ಕಾರಣ ಕೇಳಿ ಮೂರು ಬಾರಿ ನೋಟಿಸ್ ನೀಡಿ, 24 ಗಂಟೆಯೊಳಗೆ ತಮ್ಮ ಸಮಜಾಯಿಷಿ ನೀಡುವಂತೆಯೂ ಸೂಚಿಸಲಾಗಿತ್ತು. ಹಾಗೂ ಸದರಿ ನೋಟಿಸ್ ವಾಟ್ಸಪ್‌ ಸಂದೇಶದ ಮೂಲಕ ಜಾರಿ ಮಾಡಲಾಗಿತ್ತು.

ಆದರೆ ಸದರಿಯವರು ಈವರೆಗೂ ಉತ್ತರ ನೀಡದೆ, ಮಾರ್ಚ್‌ 4ರಿಂದ ಮಾರ್ಚ್‌ 28ರವರೆಗೂ ಕರ್ತವ್ಯಕ್ಕೂ ಹಾಜರಾಗದೇ, ಜಿಲ್ಲೆಯ ಯಾವುದೇ ಕರೆಗಳನ್ನೂ ಸ್ವೀಕರಿಸದೇ ಚುನಾವಣಾ ಕರ್ತವ್ಯದಲ್ಲಿ ನಿರ್ಲಕ್ಷತನ ತೋರಿರುವುದು ಕಂಡುಬಂದಿದ್ದು, ಸದರಿ ಅಧಿಕಾರಿ ಚಿದಾನಂದರ ವಿರುದ್ಧ ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951ರ ಕಲಂ 134ರ ಅಡಿಯಲ್ಲಿ ಅಗತ್ಯ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಗಳೂ ಆಗಿರುವ ವೈಶಾಲಿ ಎಂ.ಎಲ್.‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ. ಎಸ್ ನೇಮಗೌಡ ಅವರಿಗೆ ಪತ್ರ ಬರೆದಿದ್ದರು.

ಈ ಹಿನ್ನೆಲೆಯಲ್ಲಿ ಗದಗ ಶಹರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.


Spread the love

LEAVE A REPLY

Please enter your comment!
Please enter your name here