ರೋಣದಲ್ಲಿ ಬಿಜೆಪಿ ಮುಖಂಡರು ಜಿ.ಎಸ್ ಪಾಟೀಲ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆ

0
Spread the love

ವಿಜಯಸಾಕ್ಷಿ ಸುದ್ದಿ, ರೋಣ

Advertisement

ಬಿಜೆಪಿಯಿಂದ ನಮ್ಮ ಗ್ರಾಮದ ಅಭಿವೃದ್ಧಿ ಅಸಾಧ್ಯ. ಈ ಹಿಂದೆ ತಾವು ಶಾಸಕರಾಗಿದ್ದಾಗ ಆಗಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹೊರತುಪಡಿಸಿ ಈಗಿನ ಶಾಸಕರಿಂದ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ, ಹೀಗಾಗಿ ನಾವು ಜನರಿಗೆ, ಯಾವ ರೀತಿ ಬಿಜೆಪಿಗೆ ಮತ ಹಾಕಿ ಅಂತಾ ಕೇಳುವುದು. ಇದನ್ನು ಅರಿತುಕೊಂಡೇ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಳ್ಳುತ್ತಿದ್ದೇವೆ ಎಂದು ಚಿಕ್ಕಮಣ್ಣೂರು ಗ್ರಾಮದ ಮುಖಂಡ ಯಲ್ಲಪ್ಪಗೌಡ ಶಿವನಗೌಡ ಪಾಟೀಲ ಹೇಳಿದರು.

ಅವರು, ಮಾಜಿ ಶಾಸಕ, ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷ ಜಿ.ಎಸ್ ಪಾಟೀಲ ಅವರ ಮನೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಸಭೆಯಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅದ್ಯಕ್ಷ ಜಿ.ಎಸ್. ಪಾಟೀಲ ಮಾತನಾಡಿ, ಚಿಕ್ಕಮಣ್ಣೂರ ಗ್ರಾಮ ನನ್ನ ತವರು ಇದ್ದಹಾಗೆ. ಗ್ರಾಮದ ಜನರು ನನ್ನನ್ನು ಮನೆ ಮಗನಕ್ಕಿಂತಲೂ ಹೆಚ್ಚಿನ ರೀತಿ ಪ್ರೀತಿಯಿಂದ ಕಂಡಿದ್ದಾರೆ. ಹೀಗಾಗಿ ಚಿಕ್ಕಮಣ್ಣೂರ ಗ್ರಾಮದ ಜನರನ್ನು ನಾನು ಮರೆಯಲು ಸಾಧ್ಯವಿಲ್ಲ ಎಂದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರೂ ಸಹ ಕುಟುಂಬಸ್ಥರು. ಮುಂದಿನ ದಿನಗಳಲ್ಲಿ ಪಕ್ಷವನ್ನು ಎಲ್ಲರೂ ಸೇರಿ ಬಲಪಡಿಸೋಣ ಎಂದರು.

ಇದೆ ಸಂದರ್ಭದಲ್ಲಿ ಅವರು, ಚಿಕ್ಕ ಮಣ್ಣೂರ ಗ್ರಾಮದ ಬಿಜೆಪಿ ಮುಖಂಡರಾದ ರಾಘವೇಂದ್ರ. ಆರ್ ಸೋಮನಗೌಡ್ರ, ಯಲ್ಕಪ್ಪಗೌಡ. ಸಿ ಪಾಟೀಲ, ದೇವಪ್ಪ ಅಂಗಡಿ, ರಾಜು.ಬಿ ಹುಗ್ಗಿ, ನಿಂಗನಗೌಡ. ಆರ್ ಪಾಟೀಲ, ಸಂತೋಷಗೌಡ. ಎಸ್ ಪಾಟೀಲ, ವೀರಪ್ಪ. ಎಚ್ ಮಾಮನಿ, ಗಿರೀಶ್ ಗೌಡ. ಎಸ್ ಶಿವಳ್ಳಿ, ಪುಂಡಲೀಕ. ಎಮ್ ಕೊಪ್ಪದ, ಮಲ್ಲಪ್ಪ. ವಾಯ್ ಶಿವಳ್ಳಿ, ಯಲ್ಲಪ್ಪಗೌಡ. ಎನ್ ಮಣ್ಣೂರ, ಕಲ್ಲನಗೌಡ ನಾಡಗೌಡ್ರ, ಸಂಗನಗೌಡ. ಎಚ್ ಪೊಲೀಸ್ ಪಾಟೀಲ, ಪ್ರಕಾಶ್ ಗೌಡ. ಜಿ ಪಾಟೀಲ, ಕಲ್ಲನಗೌಡ. ವಿ ಪಾಟೀಲ
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಅವರನ್ನು ಪಕ್ಷದ ಶಾಲು ಹೊದಿಸುವ ಮೂಲಕ ಪಕ್ಷಕ್ಕೆ ಜಿ. ಎಸ್ ಪಾಟೀಲ ಬರಮಾಡಿಕೊಂಡರು.

ಪುರಸಭೆ ಉಪಾಧ್ಯಕ್ಷ ಸಂಗನಗೌಡ ಪಾಟೀಲ, ಪುರಸಭೆಯ ಮಾಜಿ ಅದ್ಯಕ್ಷ ವೆಂಕಣ್ಣ ಬಂಗಾರಿ, ಪಿಎಲ್ ಡಿ ಬ್ಯಾಂಕ್ ಸದಸ್ಯ ಬಸವರಾಜ ನವಲಗುಂದ, ವಿ
ಬಿ. ಸೋಮನಕಟ್ಟಿಮಠ, ಯೂಸುಫ್ ಇಟಗಿ ಸೇರಿದಂತೆ ಚಿಕ್ಕಮಣ್ಣೂರ, ಅರಹುಣಸಿ, ಸವಡಿ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here