‘ದಂಡುಪಾಳ್ಯ’ ಸ್ಟೈಲ್ ನಲ್ಲಿ ಸುಲಿಗೆ; ಭಯಭೀತಗೊಂಡ ಅವಳಿ ನಗರದ ಜನ!

0
Spread the love

ವಿಜಯಸಾಕ್ಷಿ ಸುದ್ದಿ, ಗದಗ:

Advertisement

ಹುಡ್ಕೋ 2ನೇ ಕ್ರಾಸ್ ನಲ್ಲಿ ಶುಕ್ರವಾರ ಮಹಿಳೆಯೊಬ್ಬರ ಮಾಂಗಲ್ಯ ಸರ ಕಿತ್ತುಕೊಂಡು ಹೋದ ಘಟನೆ ಗೊತ್ತೇ ಇದೆ. ಆದರೆ, ಇದಕ್ಕೂ ಮೊದಲು ಖದೀಮರು‌ ನಡೆಸಿದ ಸಿದ್ಧತೆ ಅವಳಿ‌ ನಗರದ ಜನರನ್ನು ಬೆಚ್ಚಿಬೀಳಿಸಿದೆ.

ಹೌದು, ಶುಕ್ರವಾರ ಘಟನೆ ನಡೆಯುವ ಮುನ್ನ ಅಂದರೆ ಹದಿನೈದು ದಿನಗಳ ಮೊದಲೇ ಖದೀಮರು ಸುಲಿಗೆ ಮಾಡಲು ಸ್ಕೆಚ್ ಹಾಕಿದ್ದರೆ ಎಂಬ ಅನುಮಾನ ಇದೀಗ ಶುರುವಾಗಿದೆ. ಇನ್ನು ‘ದಂಡುಪಾಳ್ಯ’ ಸಿನಿಮಾದಲ್ಲಿ ಮಹಿಳೆಯೊಬ್ಬಳು‌ ಕುಡಿಯಲು ನೀರು ಕೇಳುವುದು, ತಿನ್ನಲು ಏನದಾರೂ ಕೊಡಿ ಅಂತಾ ಕೇಳುವ ನೆಪದಲ್ಲಿ ಮನೆಯಲ್ಲಿ ಯಾರ್ಯಾರು ಇರುತ್ತಾರೆ, ಎಷ್ಟು ಜನ ಇರುತ್ತಾರೆ ಎಂಬುದನ್ನು ತಿಳಿದುಕೊಂಡು ತನ್ನ ಗ್ಯಾಂಗ್ ನವರಿಗೆ ಹೇಳುತ್ತಾಳೆ. ಬಳಿಕ ಅವರೆಲ್ಲರೂ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಗೆ ನುಗ್ಗಿ ಕನ್ನ ಹಾಕುವುದನ್ನು ನೋಡಿದ್ದೇವೆ. ಅಂತಹದೇ ಘಟನೆ ಗದಗನಲ್ಲೂ ನಡೆಯಿತೇ ಎಂಬ ಶಂಕೆ ಶುರುವಾಗಿದೆ.

ಹುಡ್ಕೋ ಕಾಲನಿಯಲ್ಲಿ ಸರಗಳ್ಳತನದ ಕೃತ್ಯ ನಡೆಯುವ ಹದಿನೈದು ದಿನಗಳ ಹಿಂದೆ ಪುಷ್ಪಾ ಎಂಬುವವರ ಮನೆಗೆ ಅಪರಿಚಿತ ಮಹಿಳೆಯೊಬ್ಬರು‌ ನೀರು ಕೇಳಿಕೊಂಡು ಮನೆಗೆ ಬಂದಿದ್ದರು. ಆಶ್ಚರ್ಯವೆಂದರೆ, ಮನೆಯ ಗೇಟ್ ತಗೆದು ಡೋರ್ ಕ್ಲೋಸ್‌ ಇದ್ದಾಗಲೂ ಕಾಲಿಂಗ್ ಬೆಲ್ಲ ಒತ್ತಿ ಮಹಿಳೆ ಹೊರಬರುವವರೆಗೂ ಬಿಡದೇ ನೀರು ಕೇಳಿದ್ದಾಳೆ ಅಂತೆ. ಇದೇ ಮಹಿಳೆ ಅಂದು ಕುಡಿಯುವ ನೀರು ಕೇಳುವ ನೆಪದಲ್ಲಿ ಮನೆಯಲ್ಲಿ ಯಾರು ಇರುತ್ತಾರೆ, ಎಷ್ಟು ಜನ ಇದ್ದಾರೆ ಎಂಬುವುದನ್ನು ತಿಳಿದುಕೊಂಡು ಹೋಗಿದ್ದಳೆ ಎಂಬ ಅನುಮಾನ ಕುಟಂಬದ ಸದಸ್ಯರು ವ್ಯಕ್ತಪಡಿಸಿದ್ದಾರೆ.

ಘಟನೆ ವಿವರ

ನಗರದ ಹುಡ್ಕೋ ಕಾಲನಿಯ ನಿವಾಸಿ ಪುಷ್ಪಾ ಎಂಬುವವರು ಶುಕ್ರವಾರ ಸಂಜೆ 7 ಗಂಟೆಗೆ ಮನೆಯಲ್ಲಿ ಮಂಗಳಗೌರಿ ಧಾರಾವಾಹಿ ವೀಕ್ಷಿಸುತ್ತಿದ್ದರಂತೆ. ಈ ವೇಳೆ ಗೇಟ್ ಸೌಂಡ್ ಬಂದಿದೆ. ಯಾರು ಎಂದು ಕೂಗಿದಾಗಲೂ ಮಾತನಾಡದ ಮಾಸ್ಕ್ ಹಾಕಿದ ಯುವಕನೊಬ್ಬ ಮನೆಯೊಳಗೆ ನುಗ್ಗಿದ್ದಾನೆ. ಪುಷ್ಪಾ ಅವರು, ಯಾರ ನೀ…ಯಾರೂ ಅಂತಾ ಕೇಳುವಷ್ಟರಲ್ಲೇ ಅವರ ಕೊರಳಲ್ಲಿದ್ದ ಚಿನ್ನದ ಮಾಂಗಲ್ಯದ ಸರಕ್ಕೆ ಕೈಹಾಕಿದ್ದಾನೆ. ಈ ವೇಳೆ ತೀವ್ರ ಪ್ರತಿರೋಧ ಒಡ್ಡಿದರೂ ಬಿಡದ ಸುಲಿಗೆಕೋರ ಕಪಾಳಕ್ಕೆ ಹೊಡೆದಿದ್ದಾನೆ. ಅಷ್ಟರಲ್ಲೇ ಇನ್ನೊಂದು ಕೋಣೆಯಲ್ಲಿ ಇದ್ದ ಮಹಿಳೆಯ ಪತಿ ಹಾಲ್ ಗೆ ಬರೋದೊರಳಗೆ ಅರ್ಧ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ.

ಅಷ್ಟಕ್ಕೂ ತೀರಾ ಸಮೀಪದಲ್ಲಿ ಹಿಟ್ಟಿನ ಗಿರಣಿ ಇದೆ. ಅಲ್ಲಿ ಜನಜಂಗುಳಿ ಇದ್ದರೂ ಆ ಯುವಕ ಮನೆಯೊಳಗೆ ಹೊಕ್ಕು ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡಿದ್ದೇ ಸೋಜಿಗವೆನಿಸುತ್ತೆ. ಘಟನೆಯ ನಂತರ ಅಕ್ಕಪಕ್ಕದ ಜನ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಶಹರ ಠಾಣೆಯ ಪೊಲೀಸರು ಖದೀಮ ಕಳ್ಳನನ್ನು ಬಂಧಿಸಲು ಜಾಲ ಬೀಸಿದ್ದಾರೆ.


Spread the love

LEAVE A REPLY

Please enter your comment!
Please enter your name here