ಮುಂದುವರೆದ ಶೋಧ ಕಾರ್ಯಾಚರಣೆ
Advertisement
ವಿಜಯಸಾಕ್ಷಿ ಸುದ್ದಿ, ರಾಣಿಬೆನ್ನೂರು
ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಮೂವರು ಯುವಕರು ನೀರುಪಾಲಾದ ಘಟನೆ ಜರುಗಿದೆ.
ರಾಣಿಬೆನ್ನೂರು ತಾಲೂಕಿನ ಮುದೇನೂರು ಗ್ರಾಮದ ಬಳಿಯ ತುಂಗಭದ್ರಾ ನದಿಯಲ್ಲಿ ನಿನ್ನೆ ಸಂಜೆ ಈ ಘಟನೆ ನಡೆದಿದೆ.
ರಾಣಿಬೆನ್ನೂರು ನಗರ ನಿವಾಸಿಗಳಾದ ನವೀನ ಕೂರಗುಂದ( 21), ವಿಕಾಸ ಪಾಟೀಲ್ (20), ಪ್ರಮೋದ (25) ಎಂಬುವರು ಭಾನುವಾರ ಸಂಜೆ ಈಜಲು ತೆರಳಿದ್ದರು.
ನೀರುಪಾಲಾದ ಸುದ್ದಿ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸ್ ಸಿಬ್ಬಂದಿಯಿಂದ ತುಂಗಭದ್ರಾ ನದಿಯಲ್ಲಿ ಮೂವರು ಯುವಕರಿಗಾಗಿ ಶೋದ ಕಾರ್ಯಾಚರಣೆ ನಡೆಸಲಾಗುತ್ತದೆ.
ಹಲಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.