ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ……
ವಿಜಯಸಾಕ್ಷಿ ಸುದ್ದಿ, ಗದಗ
ಕುಡಿದ ಅಮಲಿನಲ್ಲಿ ಯುವಕನೊಬ್ಬನ ತಲೆಗೆ ಬಿಯರ್ ಬಾಟಲ್ ನಿಂದ ತಲೆಗೆ ಹಲ್ಲೆ ಮಾಡಿದ್ದರಿಂದ ತೀವ್ರ ಗಾಯಗೊಂಡ ಘಟನೆ ಮೊನ್ನೆ ನಡೆದಿದೆ.
ಇಲ್ಲಿನ ಹಳೆ ಡಿಸಿ ಕಚೇರಿ ಬಳಿ ಇರುವ ಬಾರವೊಂದರಲ್ಲಿ ಈ ಘಟನೆ ನಡೆದಿದ್ದು, ಆರು ಸೆಕೆಂಡ್ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ ಪಾರ್ವತಿ ಪೆಟ್ರೋಲಿಯಂ ಮಾಲೀಕರ ಮೇಲೆ ಚೀಟಿಂಗ್ ಕೇಸ್ ; ತಪ್ಪಾಗಿ ಜಮಾ ಆದ ಹಣ ಮರಳಿಸದೇ ವಂಚನೆ ಆರೋಪ….
ರವಿವಾರ ಸಮುದ್ರ ಬಾರನಲ್ಲಿ ಕುಳಿತಿದ್ದ ಯುವಕರ ಮಧ್ಯೆ ಜೋರಾದ ಗಲಾಟೆ ನಡೆದಿದೆ. ಬಿಯರ್ ಬಾಟಲ್ ನಿಂದ ಹಲ್ಲೆ ಮಾಡಿದ ಸದ್ದಿಗೆ ಅಕ್ಕಪಕ್ಕದಲ್ಲಿ ಕುಳಿತಿದ್ದ ಗ್ರಾಹಕರು ಕಂಗಾಲಾಗಿದ್ದಾರೆ.
ನಂತರ ಯುವಕನೊಬ್ಬ ತಲೆ ಹಿಡಿದುಕೊಂಡು ಹೊರ ಬಂದಿದ್ದಾನೆ. ಆಗ ಅವನ ತಲೆಯಿಂದ ರಕ್ತ ಸುರಿದಿದೆ. ಕೈಯಿಂದ ತಲೆ ಒರೆಸಿಕೊಂಡು ಕೈಗೆ ಮೆತ್ತಿದ ರಕ್ತದಿಂದಲೇ ಮುಖಕ್ಕೂ ಸವರಿಕೊಂಡಿದ್ದಾನೆ. ಈ ದೃಶ್ಯದ ಆರು ಸೆಕೆಂಡ್ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದೆ. ಅದೀಗ ವೈರಲ್ ಆಗಿದೆ.
ಈ ಬಗ್ಗೆ ಸಮುದ್ರ ಬಾರ ಮ್ಯಾನೇಜರ್ ಸಿದ್ದಪ್ಪ ತಂದೆ ಯಲ್ಲಪ್ಪ ಹೊಂಬಳ ಎಂಬುವರು ಶಹರ ಪೊಲೀಸರಿಗೆ ದೂರು ನೀಡಿದ್ದು, ಶಹರ ಪೊಲೀಸ್ ಠಾಣೆಯಲ್ಲಿ IPC 1860(U/s-160)0094/2023ರಂತೆ ಪ್ರಕರಣ ದಾಖಲಾಗಿದೆ.