ವಿಜಯಸಾಕ್ಷಿ ಸುದ್ದಿ, ಗದಗ
ಹೆತ್ತ ಮಗನನ್ನು ಕಳೆದುಕೊಂಡ ಆ ಕುಟುಂಬ ಸಂಕಷ್ಟ, ಆ ನೋವಿನಿಂದ ಇನ್ನೂ ಹೊರ ಬಂದಿಲ್ಲ. ಮತ್ತೇ ಈಗ ಆ ಕುಟುಂಬಕ್ಕೆ ಜೀವ ಭಯ ಎದುರಾಗಿದೆ.
ಹೌದು ನಿನ್ನೆ ಸ್ವಾತಂತ್ರ್ಯೋತ್ಸವ ದಿನವೇ ಹಾಡುಹಗಲೇ ಭಜರಂಗದಳದ ಕಾರ್ಯಕರ್ತ ಎನ್ನಲಾಗುತ್ತಿರುವ ಯುವಕನೊಬ್ಬ, ಮನೆಗೆ ಹೊರಟಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಮರ್ಡರ್ ಕೇಸ್ ವಾಪಾಸು ತಕ್ಕೋ…ಇಲ್ಲ ಅಂದ್ರ ನಿನ್ನ ಮತ್ತು ನಿನ್ನ ಇಬ್ಬರು ಮಕ್ಕಳನ್ನು ಜೀವ ಸಹಿತ ಬಿಡಂಗಿಲ್ಲ ಅಂತ ಬೆದರಿಕೆ ಹಾಕಿದ ಘಟನೆ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ನಡೆದಿದೆ.

ಸುಭಾನಸಾಬ್ ಅಬ್ದುಲ್ ಸಾಬ್ ಶಾಪೂರ ಎಂಬುವವರ ಮಗ ಸಮೀರ ಶಾಪೂರನನ್ನು ಜನವರಿ ತಿಂಗಳಲ್ಲಿ ಅಟ್ಟಾಡಿಸಿ ಕೊಲೆ ಮಾಡಲಾಗಿತ್ತು. ಆ ದೃಶ್ಯ ಸಿ ಸಿ ಕ್ಯಾಮರಾದಲ್ಲಿ ಸೆರೆಯಾಗಿ ಎಲ್ಲಡೆ ವೈರಲ್ ಆಗಿತ್ತು. ಕೊಲೆ ಮಾಡಿದವರು ಭಜರಂಗದಳ ಕಾರ್ಯಕರ್ತರು ಎಂದು ಸಮೀರನ ಕುಟುಂಬದವರು ಆರೋಪವಾಗಿತ್ತು. ಆ ಪ್ರಕರಣ ಇನ್ನೂ ನ್ಯಾಯಲಯದಲ್ಲಿ ಚಾಲ್ತಿಯಲ್ಲಿದೆ.
ಈಗ ಇದೇ ಪ್ರಕರಣ ವಾಪಾಸು ತಕ್ಕೋ ಅಂತ ನರಗುಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ವಿರೂಪಾಕ್ಷ ತಂದೆ ಚಂದ್ರಣ್ಣ ಸಂಬಾಳದ ಎಂಬಾತ, ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ. ಆಗ ಸ್ಥಳದಲ್ಲಿದ್ದ ಜನರು ಬಿಡಿಸಿದ್ದಾರೆ. ಆಗ ಸುಭಾನಸಾಬ್ ತಮ್ಮ ಇನ್ಬೊಬ್ಬ ಪುತ್ರನನ್ನು ಕರೆಸಿಕೊಂಡಿದ್ದಾರೆ. ಆಗಲೂ ವಿರೂಪಾಕ್ಷ ಸುಮ್ಮನಿರದೇ ಅವಾಚ್ಯ ಶಬ್ದಗಳಿಂದ ನಿಂದಿಸಿ ನಿನ್ನ ಹಾಗೂ ನಿನ್ನ ಮಕ್ಕಳನ್ನು ಜೀವಸಹಿತ ಬಿಡಂಗಿಲ್ಲ ಅಂತ ಬೆದರಿಕೆ ಹಾಕಿದ್ದಾನೆ ಎಂದು ದೂರು ದಾಖಲಾಗಿದೆ.

ರಾತ್ರಿಯವರೆಗೂ ಸತಾಯಿಸಿದ ಪೊಲೀಸರು.!?
ನರಗುಂದ ಪಟ್ಟಣದಲ್ಲಿ ಒಂದಿಷ್ಟು ಸೂಕ್ಷ್ಮ ವಾತಾವರಣದ ಇದೆ. ಆಗಾಗ ಒಂದಿಷ್ಟು ಜನ ಯುವಕರು ಹಲ್ಲೆ ಮಾಡೋದು ಗಲಾಟೆ ಮಾಡೋದು ಸಾಮಾನ್ಯವಾಗಿದೆ. ಹೀಗಾಗಿ ಪೊಲೀಸರು ಕಟ್ಟೆಚ್ಚರ್ ವಹಿಸಿದ್ದಾರೆ. ಆದರೆ ಕೆಲ ಪೊಲೀಸರ ತಾರತಮ್ಯದಿಂದ ಕೆಲ ಪುಂಡ ಪೋಕರಿಗಳಿಗೆ ಅನುಕೂಲವಾಗಿ ಪರಿಣಮಿಸಿದೆ ಎಂದು ಮೂಲಗಳು ತಿಳಿಸಿವೆ.
ನಿನ್ನೆಯ ಮಧ್ಯಾಹ್ನ ಘಟನೆ ನಡೆದರೂ ರಾತ್ರಿಯವರೆಗೂ ದೂರು ಸ್ವೀಕರಿಸದೇ ರಾಜೀ ಪಂಚಾಯತಿ ಮಾಡಿಕೊಳ್ಳಿ ಎಂಬ ಉಪದೇಶ ನೀಡಿದ್ದಾರೆ. ಕೊನೆಗೂ ಫಿರ್ಯಾದಿದಾರರ ಒತ್ತಡ ಜಾಸ್ತಿಯಾದಾಗ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಹಲ್ಲೆ, ಜೀವ ಬೆದರಿಕೆ ಹಾಕಿದ್ದು ನಾಲ್ಕು ಜನ ಯುವಕರಂತೆ, ಆದರೆ ಪೊಲೀಸರು ಮಾತ್ರ ಒಬ್ಬನ ಮೇಲೆ ಮಾತ್ರ ಕೇಸ್ ಮಾಡಿಕೊಂಡು ಇನ್ನೂ ಮೂರು ಜನರನ್ನು ಪ್ರಕರಣದಿಂದ ಕೈ ಬಿಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.