ಇನ್ ಸ್ಪೈರ್ ಅವಾರ್ಡ್ 2020-21; ನವದೆಹಲಿಗೆ ತೆರಳಿದ ವಿದ್ಯಾರ್ಥಿಗಳು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಇನ್ ಸ್ಪೈರ್ ಅವಾರ್ಡ್ 2020-21 ನೇ ಸಾಲಿನ 9ನೇ ರಾಷ್ಟ್ರಹಂತದ ವಸ್ತುಪ್ರದರ್ಶನ ಹಾಗೂ ಮಾದರಿ ಸ್ಪರ್ಧೆಯು ನವದೆಹಲಿಯಲ್ಲಿ ಸೆ. 14 ರಿಂದ 16 ರ ವರೆಗೆ ನಡೆಯಲಿದ್ದು, ಗದಗ ಜಿಲ್ಲೆಯಿಂದ 6 ವಿದ್ಯಾರ್ಥಿಗಳು ಶನಿವಾರ ರೈಲು ಮೂಲಕ ನವದೆಹಲಿಗೆ ತೆರಳಿದರು.

ಮುಂಡರಗಿ ತಾಲ್ಲೂಕಿನ ಶ್ರೀನಿವಾಸ್ ಅಂಬರೀಷ್ ಮಸಲವಾಡ, ಗಜೇಂದ್ರಗಡ ತಾಲೂಕಿನ ಅನುಶ್ರೀ ಅಮರಯ್ಯ ಗೌರಿಮಠ, ಕಳಕೇಶ್ ಶಂಕ್ರಪ್ಪ ಗುಂಡಿ, ಈಶ್ವರ್ ಸಂಗಪ್ಪ ಸೂರಿ, ಶಿರಹಟ್ಟಿ ತಾಲೂಕಿನ ರೇಷ್ಮಾ ಶೇಖಪ್ಪ ಲಮಾಣಿ, ಗದಗ ಶಹರದ ನೇಹಾ ಬಿ ಕುಲಕರ್ಣಿ ಈ ಆರು ವಿದ್ಯಾರ್ಥಿಗಳು ತಾವು ತಯಾರಿಸಿದ ಮಾದರಿಯೊಂದಿಗೆ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಮಾದರಿ ಸ್ಪರ್ಧೆಯಲ್ಲಿ ಭಾಗಿಯಾಗಲಿದ್ದಾರೆ. ಉಸ್ತುವಾರಿ ಶಿಕ್ಷಕಿಯಾಗಿ ಶ್ರೀಮತಿ ಭುವನೇಶ್ವರಿ ಜಿ ಪೋಲೀಸ್ ಪಾಟೀಲ್ ತೆರಳಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಗದಗ ಪ್ರಾಚಾರ್ಯ ಎಸ್ ಡಿ ಗಾಂಜಿ, ಜಿಲ್ಲಾ ನೋಡಲ್ ಅಧಿಕಾರಿ ಹಾಗೂ ಉಪನ್ಯಾಸಕ ಶಂಕರ್ ಹಡಗಲಿ, ಹಿರಿಯ ಉಪನ್ಯಾಸಕರಾದ ಆರ್. ಎಸ್. ಬುರಡಿ, ತಾಂತ್ರಿಕ ಸಹಾಯಕರಾದ ಶ್ರೀಮತಿ ಎಸ್. ಎಸ್.ಗೌಡರ ಹಾಗೂ ತಾಲೂಕು ನೋಡಲ್ ಶಿಕ್ಷಕರು ಮತ್ತು ಪಾಲಕರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here