ಗ್ರಾ.ಪಂ ಎದುರು ಗ್ರಾಮಸ್ಥರಿಂದ ಧರಣಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿತಾಲೂಕಿನ ಯಲಿಶಿರೂರ ಗ್ರಾಮದ ಗ್ರಾ.ಪಂ ಕಾರ್ಯಾಲಯದ ಎದುರು ಗ್ರಾಮಸ್ಥರು ಅನಿರ್ಧಿಷ್ಟಾವಧಿ ಧರಣಿ ನಡೆಸಿದರು.

Advertisement

ಗ್ರಾ.ಪಂ ವತಿಯಿಂದ ನಿರ್ಮಿಸಿಕೊಟ್ಟ ಮನೆಗಳಿಗೆ ಕಂಪ್ಯೂಟರ್ ಉತಾರ ಮಾಡಿಕೊಡಬೇಕು, ಅಕ್ರಮವಾಗಿ ಕಟ್ಟಿಕೊಂಡ ಮನೆಗಳನ್ನು ಸಕ್ರಮಗೊಳಿಸಬೇಕು, ಶಿರುಂಜ ಗ್ರಾಮದ ಪ್ರೌಢಶಾಲೆಯ ಶೌಚಾಲಯ ನಿರ್ಮಾಣ ಕಾಮಗಾರಿ ಪೂರ್ತಿಗೊಳಿಸಬೇಕು ಇವೇ ಮುಂತಾದ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಫಕೀರೇಶ ಶಿಂಧೆ, ಶರೀಪಸಾಬ ನದಾಫ್, ಮಾರುತಿಗೌಡ ಕಗ್ಗಲಗೌಡ, ಅಲಿಸಾಬ ನದಾಫ್, ಮಂಜುನಾಥ ಹುಯಿಲಗೋಳ, ಸೋಮಣ್ಣ ಬಿಡನಾಳ, ಬಸಲಿಂಗಪ್ಪ ಹಸರೇಡಿ, ರಾಜು ಹಸರೇಡಿ, ಭೀಮವ್ವ ಲೆಂಖೆನ್ನವರ, ಲಕ್ಕವ್ವ ಪೂಜಾರ, ಅಂಜುಮಾ ನದಾಫ್, ಮುತ್ತಪ್ಪ ಗುಡ್ಡದ, ತಿಪ್ಪಣ್ಣ ಮೂಲಿಮನಿ, ಹೊನಕೇರಿ ಕಾ.ಮಳನರ, ದಾವಲಸಾಬ ತಪಲದಡ್ಡಿ, ಚನ್ನಬಸಪ್ಪ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here