ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಸಮಾಜ ಕಲ್ಯಾಣ ಇಲಾಖೆಯ ಎಸ್.ಸಿ./ಎಸ್.ಟಿ. ದೌರ್ಜನ್ಯ ಪ್ರತಿಬಂಧಕ ಕಾಯ್ದೆ 1989ರ ಗದಗ ಜಿಲ್ಲೆ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯರಾಗಿ ದಲಿತ ಯುವ ನಾಯಕ ವಿನಾಯಕ ಎಸ್.ಬಳ್ಳಾರಿ ಆಯ್ಕೆಯಾಗಿದ್ದು, ಸಾಮಾಜಿಕ ಸಮಾನತೆಗೆ ಪ್ರಯತ್ನಿಸುತ್ತಿರುವ ನಾಯಕರಿಗೆ ಸಿಕ್ಕ ಗೌರವವಾಗಿದೆ ಎಂದು ಮಾರುತಿ ಗುಡಿಮನಿ, ಬಸವರಾಜ ಕಡೇಮನಿ, ದತ್ತು ಜೋಗಣ್ಣವರ, ಸುರೇಶ ನಂದೆಣ್ಣವರ, ಶರಣು ಪೂಜಾರ, ಸುಭಾಸ ದೊಡ್ಡಮನಿ, ಹನಮಂತ ಬೆಳವಣಕಿ, ಪರಶುರಾಮ ಪೂಜಾರ, ಸತೀಶ ಹುಲಿ, ಶ್ರೀನಿವಾಸ ಗೌಡರ, ಕೃಷ್ಣಾ ಪೂಜಾರ, ಹರೀಶ ಬಾವಿಮನಿ, ಮುತ್ತು ಪೂಜಾರ ಮುಂತಾದವರು ಅಭಿನಂದಿಸಿದ್ದಾರೆ.
Advertisement