ತಮಿಳಿನ ಖ್ಯಾತ ನಟ ವಿಶಾಲ್ ಮತ್ತೆ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವಿಶಾಲ್ ವೇದಿಕೆಯಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದು ಅಭಿಮಾನಿಗಳು ಕಂಗಾಲಾಗಿದ್ದಾರೆ. ಈ ಹಿಂದೆ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಅವರ ಕೈ ನಡುಗುತ್ತಿತ್ತು. ಆ ಬಳಿಕ ಸುಧಾರಿಸಿಕೊಂಡಿದ್ದರು. ಇದೀಗ ಮತ್ತೆ ವಿಶಾಲ್ ಅನಾರೋಗ್ಯಕ್ಕೆ ಒಳಗಾಗಿದ್ದು ಅಭಿಮಾನಿಗಳಲ್ಲಿ ಅಂತಕ ಶುರುವಾಗಿದೆ.
ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಕೂವಾಗಮ್ನಲ್ಲಿರುವ ಕೂತಾಂಡವರ್ ದೇವಸ್ಥಾನದಲ್ಲಿ ಭಾನುವಾರ (ಮೇ 11) ರಾತ್ರಿ ತೃತೀಯಲಿಂಗಿಗಳ ಸೌಂದರ್ಯ ಸ್ಪರ್ಧೆ ನಡೆಯಿತು. ಚಿತ್ತಿರೈ (ತಮಿಳು ತಿಂಗಳು) ಆಚರಣೆಯ ಭಾಗವಾಗಿ ಟ್ರಾನ್ಸ್ಜೆಂಡರ್ಗಳಿಗಾಗಿ ನಡೆದ ‘ಮಿಸ್ ಕೂವಾಗಮ್ 2025′ ಸೌಂದರ್ಯ ಸ್ಪರ್ಧೆಯಲ್ಲಿ ನಾಯಕ ವಿಶಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಇದರ ಭಾಗವಾಗಿ ವಿಶಾಲ್ ವೇದಿಕೆಯ ಮೇಲೆ ನಿಂತು ಎಲ್ಲರಿಗೂ ಶುಭಾಶಯ ಕೋರುತ್ತಿದ್ದಾರೆ. ಅಷ್ಟರಲ್ಲಿ, ಅವರು ವೇದಿಕೆಯ ಮೇಲೆ ಮೂರ್ಛೆ ಹೋದಂತೆ ಕಂಡುಬಂದಿದ್ದು ಇದು ಅವರ ಅಭಿಮಾನಿಗಳಿಗೆ ಕಂಗಲಾಗುವಂತೆ ಮಾಡಿದೆ.
ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲರೂ ಏನಾಯಿತು ಎಂದು ಅರ್ಥವಾಗದೆ ಗೊಂದಲಕ್ಕೊಳಗಾದರು. ವಿಶಾಲ್ ಚೇತರಿಸಿಕೊಂಡರು ಮತ್ತು ತಕ್ಷಣದ ಪ್ರಥಮ ಚಿಕಿತ್ಸೆ ನೀಡಿದ ನಂತರ ಕಣ್ಣು ತೆರೆದರು. ನಂತರ ಅಲ್ಲೇ ಇದ್ದ ಮಾಜಿ ಸಚಿವ ಪೊನ್ಮುಡಿ ಅವರು ವಿಶಾಲ್ ಅವರನ್ನು ಆಸ್ಪತ್ರೆಗೆ ಕರೆದೊಯ್ದರು.
ಕೆಲವು ತಿಂಗಳ ಹಿಂದೆ ವಿಶಾಲ್ ನಾಯಕನಾಗಿ ನಟಿಸಿದ್ದ ‘ಮದ ಗಜ ರಾಜ’ ಚಿತ್ರದ ಪ್ರಚಾರದ ಸಮಯದಲ್ಲಿ ಅವರು ಅನಿರೀಕ್ಷಿತ ಸ್ಥಿತಿಯಲ್ಲಿ ಕಾಣಿಸಿಕೊಂಡರು. ಅವರು ತುಂಬಾ ನಡುಗುತ್ತಿರುವಂತೆ, ದುರ್ಬಲರಾಗಿ ಕಾಣಿಸಿದರು. ಮಾತನಾಡಲು ಸಹ ಅಸಮರ್ಥರಾಗಿದ್ದರು. ಆ ಸಮಯದಲ್ಲಿ ಅವರ ಆರೋಗ್ಯದ ಬಗ್ಗೆ ಸಾಕಷ್ಟು ಊಹಾಪೋಹಗಳು ಹಬ್ಬಿದ್ದವು. ಅವರು ವೇದಿಕೆಯ ಮೇಲೆ ಕನಿಷ್ಠ ನಾಲ್ಕು ನಿಮಿಷಗಳ ಕಾಲ ಮಾತನಾಡಲು ಸಾಧ್ಯವಾಗಲಿಲ್ಲ. ಇದು ಆ ಸಮಯದಲ್ಲಿ ವಿಶಾಲ್ ಅವರ ಆರೋಗ್ಯದ ಬಗ್ಗೆ ಬಿಸಿ ಚರ್ಚೆಗೆ ಕಾರಣವಾಯಿತು. ‘ವೈರಲ್ ಜ್ವರ ಬಂದಿದ್ದು, ಇದಕ್ಕೆ ಮಾತನಾಡಲು ಸಾಧ್ಯವಾಗಿಲ್ಲ’ ಎಂದಿದ್ದರು. ಇದೀಗ ಮತ್ತೆ ವಿಶಾಲ್ ಆರೋಗ್ಯದಲ್ಲಿ ಏರುಪೇರಾಗಿದ್ದು ವಿಶಾಲ್ ಆದಷ್ಟು ಬೇಗ ಚೇತರಿಸಿಕೊಳ್ಳಿಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.