ವಿಜಯಸಾಕ್ಷಿ ಸುದ್ದಿ, ಗದಗ : ರೋರ್ಯಾಕ್ಟ್ ಸಂಸ್ಥೆ ಜೆ.ಟಿ. ಕಾಲೇಜ್ ಬಿಸಿಎ & ಬಿಬಿಎ ಗದಗ ಹಾಗೂ ರೋಟರಿ ಸಂಸ್ಥೆ ಗದಗ ಬೆಟಗೇರಿಯ ಸದಸ್ಯರು ಜೀವನ ಜ್ಯೋತಿ ಶಿವರತ್ನ ವೃದ್ಧಾಶ್ರಮಕ್ಕೆ ಭೇಟಿ ನೀಡಿ, ಆಶ್ರಮದಲ್ಲಿರುವ ಸುಮಾರು 20 ಜನ ವೃದ್ಧರ ಆರೋಗ್ಯವನ್ನು ವಿಚಾರಿಸಿದರು.
Advertisement
ಜೀವನ ಜ್ಯೋತಿ ಶಿವರತ್ನ ವೃದ್ಧಾಶ್ರಮದ ಮೇಲ್ವಿಚಾರಕರಾದ ಮಂಜುಳಾ ಲಕ್ಕುಂಡಿಯವರು ಎಲ್ಲ ವಿದ್ಯಾರ್ಥಿ ಸದಸ್ಯರನ್ನು ಸ್ವಾಗತಿದರು. ಸಂಸ್ಥೆಯ ಅಧ್ಯಕ್ಷ ವಿಶ್ವಾಸ ಕೊಪ್ಪಳ, ಕಾರ್ಯದರ್ಶಿ ವಿರೇಂದ್ರ ಚನ್ನಪ್ಪನ್ನವರ, ಪ್ರಜ್ವಲ, ರಾಜು, ಪ್ರೀತಮ್, ಶಮಂತ, ಸಂಗಮೇಶ, ಪ್ರಿಯಾಂಕಾ, ಶ್ರೀನಾಥ, ಶಿವಕುಮಾರ, ಪಲ್ಲವಿ, ಶ್ರದ್ಧಾ, ಪ್ರಜ್ವಲ್ ಜೆ, ಕಲ್ಲಯ್ಯ, ರಾಘವೇಂದ್ರ, ಚಂದನಾ, ಪುಷ್ಪಾ ಹಾಗೂ ರೋಟರಿ ಸಂಸ್ಥೆಯ ಕಾರ್ಯದರ್ಶಿ ವೀಣಾ ತಿರ್ಲಾಪೂರ, ಸದಸ್ಯ ರೊ. ಶ್ರೀಧರ ಸುಲ್ತಾನಪೂರ ಮುಂತಾದವರು ಉಪಸ್ಥಿತರಿದ್ದರು.