ನಮ್ಮದು ಯತ್ನಾಳ್ ಬಣವಲ್ಲ. ಇರೋದು ಒಂದೇ ಬಣ, ಅದು ಬಿಜೆಪಿ ಬಣ: ರಮೇಶ್ ಜಾರಕಿಹೊಳಿ

0
Spread the love

ಬಳ್ಳಾರಿ: ನಮ್ಮದು ಯತ್ನಾಳ್ ಬಣವಲ್ಲ. ಇರೋದು ಒಂದೇ ಬಣ, ಅದು ಬಿಜೆಪಿ ಬಣ ಎಂದು ಶಾಸಕ ರಮೇಶ್ ಜಾರಕಿಹೊಳಿ ಬಣ ಬಡಿದಾಟ ಕುರಿತು ಸ್ಪಷ್ಟನೆ ನೀಡಿದ್ದಾರೆ. ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ವಿವಾದ ವಿಚಾರವಾಗಿ ಪಕ್ಷಾತೀತವಾಗಿ ಹೋರಾಟ ನಡೆಯುತ್ತಿದೆ. ನಮ್ಮದು ಯತ್ನಾಳ್ ಬಣವಲ್ಲ. ಇರೋದು ಒಂದೇ ಬಣ, ಅದು ಬಿಜೆಪಿ ಬಣ ಸ್ಪಷ್ಟಪಡಿಸಿದರು.

Advertisement

ವಕ್ಫ್ ಬೋರ್ಡ್ ವಿಚಾರದಲ್ಲಿ ಎರಡನೇ ಹಂತದ ಹೋರಾಟ ಮಾಡುತ್ತೇವೆ. ಜ.4 ರಂದು ಬಳ್ಳಾರಿಯ ಕಂಪ್ಲಿಯಲ್ಲಿ ಸಮಾವೇಶ ಮಾಡ್ತೇವೆ. ಜ.6 ರಂದು ಕೂಡ ಹೋರಾಟ ನಡೆಯಲಿದೆ. ವಕ್ಫ್ ವಿಚಾರದಲ್ಲಿ ಹಿಂದೂ-ಮುಸ್ಲಿಂ ಸಮುದಾಯದವರಿಗೆ ಅನ್ಯಾಯವಾಗಿದೆ. ವಕ್ಫ್ ಕಾಯ್ದೆ ಸಂಪೂರ್ಣವಾಗಿ ತೊಲಗಬೇಕು ಅಂತ ನಾವು ಹೋರಾಟ ಮಾಡ್ತೇವೆ ಎಂದು ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here