ನಮ್ಮ ಇತಿಹಾಸವನ್ನು ನಾವು ತಿಳಿದಿರಬೇಕು

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಂಗೀತ ಕ್ಷೇತ್ರಕ್ಕೆ ರೋಣ ತಾಲೂಕಿನ ಕೊಡುಗೆ ಅಪಾರ. ನಮ್ಮ ಇತಿಹಾಸವನ್ನು ನಾವು ತಿಳಿದುಕೊಂಡಿರಬೇಕು. ರೋಣದ ನೀಲಕಂಠ ಬುವಾ, ಮರಿಯಪ್ಪ, ಅಮರಗೋಳ್ಕರ ಮುಂತಾದವರು ಸಂಗೀತ ಕ್ಷೇತ್ರಕ್ಕೆ ತಮ್ಮದೇ ಆದ ಕಾಣಿಕೆಯನ್ನು ನೀಡಿದ್ದಾರೆ. ಡಾ. ಕೆ.ಬಿ. ಧನ್ನೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಮರಗೋಳ್ಕರ ಹೆಸರಿನಲ್ಲಿ ಸಂಗೀತ ಪಾಠಶಾಲೆಯನ್ನು ಪ್ರಾರಂಭಿಸಿದ್ದು ಸ್ತುತ್ಯವಾದ ಕಾರ್ಯ ಎಂದು ರೋಣ ಗುಲಗಂಜಿ ಮಠದ ಶ್ರೀ ಗುರುಪಾದ ದೇವರು ಹೇಳಿದರು.

Advertisement

ಪಟ್ಟಣದ ಡಾ. ಕೆ.ಬಿ. ಧನ್ನೂರ ಪಿಎಸ್‌ಎಸ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಸಾಹಿತ್ಯ, ಸಂಗೀತ, ಕಲೆಯ ಜ್ಞಾನದ ಅಭಿರುಚಿ ಇಲ್ಲದವನನ್ನು ಪಶು ಎಂದು ಹಿರಿಯರು ಕರೆದಿದ್ದಾರೆ. ನೀವು ಚಿಕ್ಕಂದಿನಲ್ಲಿಯೇ ಈ ಜ್ಞಾನವನ್ನು ಹೊಂದಿದರೆ ನಿಮ್ಮ ಮನಸ್ಸು ಯಾವಾಗಲೂ ಶಾಂತವಾಗಿರುತ್ತದೆ. ನಿಮ್ಮ ವ್ಯಕ್ತಿತ್ವಕ್ಕೊಂದು ಮೆರಗು ಬರುತ್ತದೆ ಎಂದು ಹೇಳಿದ ಶ್ರೀಗಳು, ಡಾ. ಕೆ.ಬಿ. ಧನ್ನೂರ ಕೇವಲ ವೈದ್ಯಕೀಯ ಕ್ಷೇತ್ರದಲ್ಲಿ ಮಾತ್ರವಲ್ಲದೆ ಸಮಾಜದ ಸರ್ವ ಕ್ಷೇತ್ರಗಳಲ್ಲಿಯೂ ತಮ್ಮ ಸಾಧನೆಯನ್ನು ತೋರಿಸಿದ್ದಾರೆ. ಇಲ್ಲಿನ ಸಂಗೀತ ಪಾಠಶಾಲೆಯನ್ನು ನಾನು ಸಂತೋಷದಿಂದ ಉದ್ಘಾಟಿಸಿದ್ದೇನೆ ಎಂದರು.

ಸಭಾಭವನವನ್ನು ಉದ್ಘಾಟಿಸಿದ ಧುರೀಣ ಮಿಥುನ್ ಪಾಟೀಲ ಮಾತನಾಡಿ, ಈ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಆದ್ದರಿಂದ ಇಲ್ಲಿ ನೂರಕ್ಕೆ ನೂರು ಫಲಿತಾಂಶ ಬರುತ್ತಿದೆ. ಪ್ರತಿಭಾವಂತ ಶಿಕ್ಷಕ ವರ್ಗ ಇರುವದರಿಂದ ಪ್ರತಿಭಾಶಾಲಿ ಮಕ್ಕಳು ಈ ಶಾಲೆಯಿಂದ ಹೊರಬರುತ್ತಿರುವುದು ಸಂತಸದ ಸಂಗತಿ ಎಂದರು.

ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಅಕ್ಷಯ ಪಾಟೀಲ ಮಾತನಾಡಿ, ವಿದ್ಯೆ ಯಾರೂ ಕದಿಯದ ಸಂಪತ್ತು. ನೀವು ಅದನ್ನು ಈಗಲೇ ಸಂಪಾದಿಸಿಕೊಳ್ಳಬೇಕು. ಅದಕ್ಕೆ ಬೇಕಾದ ಎಲ್ಲ ವಾತಾವರಣ ಈ ಶಾಲೆಯಲ್ಲಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಿ ಎಂದರು.

ಡಾ. ಕೆ.ಬಿ. ಧನ್ನೂರ ಅಧ್ಯಕ್ಷತೆ ವಹಿಸಿದ್ದರು. ಎಂ.ಎಸ್. ದಢೇಸೂರಮಠ ಮಾತನಾಡಿದರು. ಐ.ಎಸ್. ಪಾಟೀಲ, ಎಂ.ಎ. ಹಿರೆವಡೆಯರ, ಯೂಸುಫ್ ಇಟಗಿ, ಕುಮಾರಸ್ವಾಮಿ ಕೋರಧಾನ್ಯಮಠ, ಸುನೀಲ ಬಸವರಡ್ಡೇರ, ಕಸ್ತೂರಿ ಧನ್ನೂರ, ಪಾರ್ವತಿ ದೊಡ್ಡಣ್ಣವರ, ಪ್ರಕಾಶ ಪಲ್ಲೇದ, ಬಿ.ಜಿ. ಹಳ್ಳೂರ, ಉಮೇಶ ಅರಹುಣಶಿ, ಎಸ್.ಎ. ಪಾಟೀಲ, ಶೇಖಪ್ಪ ಕೆಂಗಾರ, ಮೈಲಾರಪ್ಪ ಚಳ್ಳಮರದ, ಅಲ್ಲಾಭಕ್ಷಿ ನದಾಫ್, ಕಳಕನಗೌಡ ಪೊಲೀಸ್‌ಪಾಟೀಲ ಇನ್ನಿತರರಿದ್ದರು.

ಆರ್.ಎನ್. ನಾಗಠಾಣ ಸ್ವಾಗತಿಸಿದರು. ಶ್ವೇತಾ ಬಾಗೇವಾಡಿ ನಿರೂಪಿಸಿದರು. ರಶ್ಮಿ ಬಸವರಡ್ಡೇರ ವಾರ್ಷಿಕ ವರದಿ ಓದಿದರು. ಮಲ್ಲನಗೌಡರ ವಂದಿಸಿದರು.

ಗ್ರಾಮೀಣ ಭಾಗದಲ್ಲಿ ಮೊತ್ತಮೊದಲು ಆಂಗ್ಲ ಮಾಧ್ಯಮ ಶಾಲೆಯನ್ನು ಪ್ರಾರಂಭಿಸಿದವರು ಡಾ. ಧನ್ನೂರರು. ಇಂದಿಗೆ 37 ವರ್ಷಗಳನ್ನು ಪೂರೈಸಿ 38ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಶಾಲೆ ಉತ್ತರೋತ್ತರ ಅಭಿವೃದ್ಧಿಯನ್ನು ಹೊಂದಲಿ. ಇಂದು ಉದ್ಘಾಟನೆಯಾದ ಬಸಲಿಂಗಪ್ಪ ಧನ್ನೂರ ಸಭಾ ಭವನಕ್ಕೆ ಅಗತ್ಯವಾದ ಅನುದಾನವನ್ನು ನೀಡಲು ಕ್ರಮ ವಹಿಸಲಾಗುವುದು.

ಜಿ.ಎಸ್. ಪಾಟೀಲ.

ಶಾಸಕರು.


Spread the love

LEAVE A REPLY

Please enter your comment!
Please enter your name here