ಸಾರ್ವಜನಿಕರೊಡಗೂಡಿ ಹೋರಾಟ ನಡೆಸುತ್ತೇವೆ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಅಭಿವೃದ್ಧಿಗೆ ಸರಕಾರದಿಂದ ಬಂದ ಅನುದಾನ ಹಂಚಿಕೆಯಲ್ಲಿ ಆಡಳಿತ ಪಕ್ಷದ ಕಾಂಗ್ರೆಸ್‌ನವರು ಬಿಜೆಪಿ ಸದಸ್ಯರ ವಾರ್ಡ್ಗಳಿಗೆ ಅನುದಾನ ನೀಡದೇ ತಾರತಮ್ಯ ಮಾಡುತ್ತಿದ್ದಾರೆ. ರಾಜಕೀಯ ದ್ವೇಷದ ಈ ಕಾರಣದಿಂದ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ. ಈ ಬಗ್ಗೆ ಆಡಳಿತ ಪಕ್ಷದ ಕ್ರಮದ ವಿರುದ್ಧ ಸಾರ್ವಜನಿಕರೊಡಗೂಡಿ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ವಿರೋಧ ಪಕ್ಷದ ಸದಸ್ಯರಾದ ಅಶ್ವಿನಿ ಅಂಕಲಕೋಟಿ, ಪೂರ್ಣಿಮಾ ಪಾಟೀಲ ಮತ್ತಿತರರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಗುರುವಾರ ನಡೆದ ಸಭೆಯಲ್ಲಿ ಆಡಳಿತ ಪಕ್ಷದ ತಾರತಮ್ಯದ ಕ್ರಮವನ್ನು ಪ್ರಶ್ನಿಸಿ ಸಭಾತ್ಯಾಗ ಮಾಡಿದ ಸದಸ್ಯರು ಸುದ್ದಿಗಾರರೊಂದಿಗೆ ಮಾತನಾಡಿ, ಪುರಸಭೆಗೆ ಬಂದ 1.93 ಕೋಟಿ ರೂ ಅನುದಾನವನ್ನು ಆಡಳಿತ ಪಕ್ಷದ ಅಧ್ಯಕ್ಷೆ ಹಾಗೂ ಸದಸ್ಯರು ತಮ್ಮ ವಾರ್ಡ್ಗಳಿಗೆ ಮಾತ್ರ ಹಂಚಿಕೊಂಡಿದ್ದಾರೆ. ಉದ್ದೇಶಪೂರ್ವಕವಾಗಿಯೇ ಬಿಜೆಪಿಯ ಸದಸ್ಯರ ವಾರ್ಡ್ಗಳನ್ನ ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.

ಈ ವಿಷಯವಾಗಿ ಅಧ್ಯಕ್ಷರನ್ನು ಕೇಳಿದರೆ, ನೀವು ಕೇಳಿಲ್ಲವಾದ್ದರಿಂದ ನಾವು ಕೊಟ್ಟಿಲ್ಲ ಎಂಬ ಹಾರಿಕೆಯ ಉತ್ತರ ನೀಡುತ್ತಾರೆ. ಅನುದಾನ ಎಲ್ಲ ವಾರ್ಡ್ಗಳಿಗೂ ಸಮನಾಗಿ ಹಂಚುವ ಕಾರ್ಯ ಮಾಡದೇ ತಮ್ಮ ಮನೆಯಿಂದ ಅನುದಾನ ನೀಡಿದಂತೆ ಮಾಡಿದ್ದಾರೆ. ಕ್ರಿಯಾಯೋಜನೆಯನ್ನು ಮೊದಲೇ ನಿರ್ಧರಿಸಿ ಬಿಜೆಪಿ ಪಕ್ಷದವರ ಅನುಮೋದನೆಗಷ್ಟೇ ಸಭೆ ಕರೆದಿದ್ದಾರೆ. ಈ ಹಿಂದೆ ಬಿಜೆಪಿ ಆಡಳಿತಾವಧಿಯಲ್ಲಿ ಪಟ್ಟಣದ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ದ್ವೇಷ, ತಾರತಮ್ಯ ಮಾಡಿರಲಿಲ್ಲ ಎಂದು ಹೇಳಿದರು.

ಈ ವೇಳೆ ಸದಸ್ಯರಾದ ಮಹಾದೇವಪ್ಪ ಅಣ್ಣಿಗೇರಿ, ವಾಣಿ ಹತ್ತಿ, ಮಂಜುಳಾ ಗುಂಜಳ, ಪೂಜಾ ಕರಾಟೆ, ಶೋಭಾ ಮೆಣಸಿನಕಾಯಿ ಇದ್ದರು.

ಈ ಕ್ರಮದ ವಿರುದ್ಧ 7 ಜನ ಬಿಜೆಪಿ ಸದಸ್ಯರು ವಿಶೇಷ ಸಾಮಾನ್ಯ ಸಭೆಯಿಂದ ಸಭಾತ್ಯಾಗ ಮಾಡಿದ್ದೇವೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇವೆ. ಪಕ್ಷದ ಹಿರಿಯ ನಾಯಕರೊಂದಿಗೆ ಚರ್ಚಿಸುತ್ತೇವೆ. ಅನುದಾನದಿಂದ ವಂಚಿತವಾದ ನಮ್ಮ ವಾರ್ಡ್ಗಳ ಜನರೊಂದಿಗೆ ಹೋರಾಟ ಕೈಗೊಳ್ಳುತ್ತೇವೆ ಎಂದು ಬಿಜೆಪಿ ಸದಸ್ಯರು ತಿಳಿಸಿದರು.


Spread the love

LEAVE A REPLY

Please enter your comment!
Please enter your name here