ವಿಜಯಸಾಕ್ಷಿ ಸುದ್ದಿ, ಗದಗ : ಗದಗ ತಾಲೂಕ ಬೆಟಗೇರಿ ಗ್ರಾಮದ ಹಾನರಿ ಲೆಫ್ಟಿನೆಂಟ್ ವಾಸುದೇವ್ ಸಿ.ಪೋಪ್ತಿ ಅವರು ಸತತವಾಗಿ 28 ವರ್ಷಗಳ ಕಾಲ ತಮ್ಮ ಅಮೋಘ ಸೇವೆಯನ್ನು ಸಲ್ಲಿಸಿ, ನಿವೃತ್ತಿ ಪಡೆದು ಮೇ 2ರಂದು ಬೆಳಿಗ್ಗೆ 9 ಗಂಟೆಗೆ ತಮ್ಮ ಸ್ವ-ಗ್ರಾಮಕ್ಕೆ ಆಗಮಿಸುತ್ತಿದ್ದಾರೆ.
ಬೆಟಗೇರಿಯ ಹೆಮ್ಮೆಯ ಪುತ್ರರಾದ ಹಾನರಿ ಲೆಫ್ಟಿನೆಂಟ್ ವಾಸುದೇವ್ ಚಿದಾನಂದಪ್ಪ ಪೋಪ್ತಿ ಇವರಿಗೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಗದಗಿನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಸರ್ವ ಸದಸ್ಯರ ಪರವಾಗಿ, ಪೋಪ್ತಿ ಬಂಧು-ಬಳಗದ ವತಿಯಿಂದ ಹಾಗೂ ಗದಗ-ಬೆಟಗೇರಿಯ ಸಮಸ್ತ ಗುರು-ಹಿರಿಯರು ಹಾನರಿ ಲೆಫ್ಟಿನೆಂಟ್ ಪೋಪ್ತಿ ಅವರಿಗೆ ಹಾರ್ದಿಕ ಸ್ವಾಗತ ಕೋರಿದ್ದಾರೆ.
ಅಂದು ಬೆಳಿಗ್ಗೆ 9 ಗಂಟೆಗೆ ಗದಗಿನ ರೈಲ್ವೆ ನಿಲ್ದಾಣದಿಂದ ಬೆಟಗೇರಿಯ ಅಂಬಾಭವಾನಿ ದೇವಸ್ಥಾನದವರೆಗೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಗದಗ ಜಿಲ್ಲಾ ಘಟಕದವರು ಹಾನರಿ ಲೆಫ್ಟಿನೆಂಟ್ ಪೋಪ್ತಿ ಅವರನ್ನು ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆಯ ಮುಖಾಂತರ ಕರೆತರಲಿದ್ದಾರೆ. ಈ ಸ್ವಾಗತ ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಹಾಲಿ ಮತ್ತು ಮಾಜಿ ಸೈನಿಕ, ಅರೆ ಸೈನಿಕ ಮತ್ತು ಎಲ್ಲಾ ವೀರನಾರಿಯರು ಪಾಲ್ಗೊಂಡು ಶುಭ ಕೋರಬೇಕೆಂದು ಸಂಘದ ಪ್ರಕಟಣೆಯಲ್ಲಿ ವಿನಂತಿಸಿದೆ.