ಬೆಂಗಳೂರು: ರಾಮಕೃಷ್ಣಗೆ ಘೋಷಿಸಿದ್ದ ಉತ್ತಮ ಶಿಕ್ಷಕ ಪ್ರಶಸ್ತಿಗೆ ತಡೆ ವಿಚಾರದ ಬಗ್ಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೋ ದೂರು ಕೊಟ್ಟಿದ್ದಾರೆ ಎಂದು ಪ್ರಶಸ್ತಿಗೆ ತಡೆ ನೀಡಿದ್ದಾರೆ. ಅಲ್ಲಿಗೆ ಹಿಜಾಬ್ ಬಗ್ಗೆ ಮಾತಾಡಿದ್ರೆ ಉತ್ತಮ ಅಂತಾ ಅಲ್ಲ.
Advertisement
ಇದು ಸರ್ಕಾರ ನಡೆದುಕೊಳ್ಳೋ ರೀತಿನಾ? ಇದು ಡಬಲ್ ಸ್ಟಾಂಡರ್ಡ್ ಧೋರಣೆ. ಈ ರೀತಿಯ ಕಾರ್ಯದಲ್ಲಿ ಸರ್ಕಾರಗಳು ತೊಡಗಬಹುದೇ? ರಾಜ್ಯ ಸರ್ಕಾರ ಕೂಡಲೇ ಮರುಪರಿಶೀಲನೆ ಮಾಡಬೇಕು. ಇದರಿಂದ ಸಮಾಜದಲ್ಲಿ ವೈಷಮ್ಯ ಹೆಚ್ಚು ಬೆಳೆಯುತ್ತವೆ. ಇದನ್ನ ದೊಡ್ಡದು ಮಾಡಬೇಡಿ, ಶಾಲೆ ಪವಿತ್ರವಾಗಿರಲು ಬಿಡಿ ಎಂದರು.