HomeKarnataka Newsನನ್ನ ಮಕ್ಕಳನ್ನು ನೋಡಲು ಹೋದ್ರೆ ನನ್ನ ಮೇಲೆ ಅಟ್ಯಾಕ್ ಮಾಡಿದ್ರು: ಪತ್ನಿ ಕೊಲೆ ಆರೋಪಕ್ಕೆ ಮಂಜ...

ನನ್ನ ಮಕ್ಕಳನ್ನು ನೋಡಲು ಹೋದ್ರೆ ನನ್ನ ಮೇಲೆ ಅಟ್ಯಾಕ್ ಮಾಡಿದ್ರು: ಪತ್ನಿ ಕೊಲೆ ಆರೋಪಕ್ಕೆ ಮಂಜ ಸ್ಪಷ್ಟನೆ

For Dai;y Updates Join Our whatsapp Group

Spread the love

ಬೆಂಗಳೂರು:- ಗಂಡ ಮಕ್ಕಳನ್ನು ಬಿಟ್ಟು ಪ್ರಿಯತಮನ ಜೊತೆಗಿರುವ ಲೀಲಾ ಕೇಸ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಯಲ್ಲಿದೆ.

ಇನ್ನೂ ಪ್ರಕರಣದಲ್ಲಿ ನನ್ನ ಹಾಗೂ ಸಂತು ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದ ಎಂದು ನಿನ್ನೆ ತಾನೇ ಲೀಲಾ ಮಾಡಿದ್ದ ಆರೋಪವನ್ನು ಇದೀಗ ಪತಿ ಮಂಜ ಅಲ್ಲಗಳೆದಿದ್ದಾರೆ. ಎಸ್, ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ಬಸವನಪುರದ ಸಂತು ಮನೆಯಲ್ಲಿರುವ ಪತ್ನಿ ಲೀಲಾ ಮತ್ತು ಆಕೆಯ ಪ್ರಿಯಕರ ಸಂತು ಮೇಲೆ ಮಂಜ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿತ್ತು. ಈ ಕುರಿತು ಆರೋಪ ಮಾಡಿದ್ದ ಮಂಜನ ಪತ್ನಿ ಲೀಲಾ, ‘ನಿನ್ನೆ ರಾತ್ರಿ 8:15 ರ ಸುಮಾರಿಗೆ ಮನೆಯ ಬಳಿ ಮಂಜು ಬರುತ್ತಿರೋದನ್ನ ನೋಡಿ ಸಂತು ಫ್ರೆಂಡ್ ಫೋನ್‌ ಮಾಡಿ ಹೇಳಿದ್ರು. ಆಗ ಸಂತು ನನಗೆ ಫೋನ್ ಮಾಡಿ ಬಾಗಿಲು ತೆಗೆಯಬೇಡ ಅಂದಿದ್ರು.

ನಾನು ಬಾಗಿಲು ತೆಗೆಯದೆ ಇದ್ದೆ. ಈ ವೇಳೆ ಸಂತು ಬರುತ್ತಿದ್ದಂತೆ ಬಾಗಿಲು ತೆರೆದ ನನ್ನ ಮೇಲೆ ಖಾರದಪುಡಿ ಎರಚಿ ಬಿಯರ್ ಬಾಟಲಿಯಿಂದ ಮಂಜ ದಾಳಿ ನಡೆಸಿದ. ಅಲ್ಲಿಯೇ ಇದ್ದ ಸಂತು ಅಡ್ಡ ಬರುತ್ತಿದ್ದಂತೆ ತಲೆಗೆ ಏಟು ಬಿತ್ತು. ಹೊಡೆದ ಬಿಯರ್ ಬಾಟಲಿಯಿಂದ ಹೊಟ್ಟೆಗೆ ಚುಚ್ಚಲು ಬಂದಾಗ ಸಂತು ಕೈ ಮತ್ತು ಹೊಟ್ಟೆ ಭಾಗದಲ್ಲಿ ಗಾಯ ಆಯ್ತು. ಜನ ಎಲ್ಲ ಹೊರಗೆ ಬರುತ್ತಿದ್ದಂತೆ ಮಂಜ ಅಲ್ಲಿಂದ ಓಡಿ ಹೋಗಿದ್ದಾನೆ’ ಎಂದು ಆರೋಪಿಸಿದ್ದಾರೆ.

ಈ ಆರೋಪವನ್ನು ಮಂಜ ಅಲ್ಲಗಳೆದಿದ್ದಾರೆ. ಸಂತು ಮತ್ತು ಲೀಲಾ ಆರೋಪಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟು ಸ್ಪಷ್ಟನೆ ನೀಡಿದ್ದಾರೆ. ರಾತ್ರಿ ಮಕ್ಕಳನ್ನ ನೋಡೋಕೆ ಸಂತು ಮನೆ ಹತ್ತಿರ ಹೋಗಿದ್ದೆ. ಮನೆಯ ಬಾಗಿಲನ್ನ ತೆಗೆಯಲಿಲ್ಲ. ಮೂರು ದಿನದಿಂದ ಮಕ್ಕಳನ್ನ ನೋಡಿರಲಿಲ್ಲ. ಈ ವೇಳೆ ಐದಾರು ಜನರಿಂದ ನನ್ನ ಮೇಲೆ ಅಟ್ಯಾಕ್ ಆಯ್ತು. ನನಗೂ ಕೈ, ಹಣೆಗೆ ಬಾಟಲಿಯಿಂದ ಹೊಡೆದಿದ್ದಾರೆ. ಆಸ್ಪತ್ರೆ ಬಳಿ ಇದ್ದೇನೆ. ನನ್ನ ಹೆಂಡತಿ ತಳ್ಳಿದಾಗ ತಲೆಗೆ ಗಾಯ ಆಗಿದೆ. ಅಲ್ಲಿಂದ ನಾನು ಬಚಾವ್ ಆಗಿ ಬಂದಿರೋದೆ ಹೆಚ್ಚು. ನಿನ್ನೆ ರಾತ್ರಿಯೇ ನನ್ನ ಸಾಯಿಸೋಕೆ ನೋಡಿದ್ರು. ನನ್ನ ಸಂಸಾರವನ್ನೇ ಸಂತು ಹಾಳು ಮಾಡಿಬಿಟ್ಟ. ನನ್ನ ಹೆಂಡತಿಗಾಗಿ ನಾನು ಹೋಗಿಲ್ಲ. ನನ್ನ ಮಕ್ಕಳಿಗಾಗಿ ಹೋಗಿದ್ದು, ಅವರು ಹೇಳ್ತಾ ಇರೋದೆಲ್ಲ ಸುಳ್ಳು. ನನ್ನ ಸಾಯಿಸೋಕೆ ಹೆಂಡ್ತಿ ಮತ್ತು ಸಂತು ಪ್ಲಾನ್ ಮಾಡ್ತಿದ್ದಾರೆ ಎಂದು ಮಂಜ ಪ್ರತಿ ಆರೋಪ ಮಾಡಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!