ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ಮುಡಾದಲ್ಲಿ ಹೆಚ್ಚಿನ ಭ್ರಷ್ಟಾಚಾರಗಳಾಗಿವೆ: ಜಿ.ಟಿ.ದೇವೇಗೌಡ

0
Spread the love

ಮೈಸೂರು: ಕಾಂಗ್ರೆಸ್​​ ಸರ್ಕಾರ ಬಂದಾಗಲೆಲ್ಲಾ ಮುಡಾದಲ್ಲಿ ಹೆಚ್ಚಿನ ಭ್ರಷ್ಟಾಚಾರಗಳಾಗಿವೆ ಎಂದು ಜೆಡಿಎಸ್​​​ ಕೋರ್​​ ಕಮಿಟಿಯ ಅಧ್ಯಕ್ಷ ಜಿ.ಟಿ.ದೇವೇಗೌಡ ಹೇಳಿದರು. ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ  ಮಾತನಾಡಿದ ಅವರು, ಕಾಂಗ್ರೆಸ್​​ ಸರ್ಕಾರ ಬಂದಾಗಲೆಲ್ಲಾ ಮುಡಾದಲ್ಲಿ ಹೆಚ್ಚಿನ ಭ್ರಷ್ಟಾಚಾರಗಳಾಗಿವೆ. ಇದರ ಜೊತೆಗೆ ವಾಲ್ಮೀಕಿ ನಿಗಮದಲ್ಲಿ ಸಿಎಂ ಗಮನಕ್ಕೆ ಬಾರದೇ ಹಣ ವರ್ಗಾವಣೆ ಹೇಗಾಯಿತು?. ಹಣಕಾಸು ಇಲಾಖೆ ಸಿಎಂಗೆ ಸೇರಿದ ವಿಚಾರ. ಮುಖ್ಯಮಂತ್ರಿಗಳು ಸಮಾಜವಾದಿ ಹಿನ್ನೆಲೆಯಿಂದ ಬಂದವರು.

Advertisement

ಹೀಗಾಗಿ ರಾಜೀನಾಣೆ ನೀಡಲಿ. ಕಳಂಕದಿಂದ ಹೊರಬಂದ ನಂತರ ಮತ್ತೆ ಸಿಎಂ ಆಗಲಿ ಎಂದು ಹೇಳಿದರು. ಇನ್ನೂ ಮುಡಾ ಮೀಟಿಂಗ್​ಗೆ ಬರುವ ಪ್ರತಿ ಫೈಲ್​ಗಳನ್ನೂ ನಾವೆಲ್ಲಾ ಪರಿಶೀಲನೆ ಮಾಡಲು ಸಾಧ್ಯವಿಲ್ಲ. ಅಧಿಕಾರಿಗಳು ಎಲ್ಲವನ್ನೂ ಪರಿಶೀಲಿಸಿ ನಂತರ ಎಲ್ಲಾ ಫೈಲ್​ಗಳನ್ನು ಸಭೆಗೆ ತಂದಿಡುವುದು ಸಾಮಾನ್ಯ. ಆಗ ನಾವು ಸರಿಯೆಂದು ಒಪ್ಪಿಗೆ ಕೊಡುತ್ತೇವೆ. ಮುಡಾದಲ್ಲಿ ಅಧಿಕಾರಿಗಳ ಆಟ ಹಾಗೂ ಅಧಿಕಾರಿಗಳ ಎಡವಟ್ಟಿನಿಂದ ಎಲ್ಲವೂ ನಡೆಯುತ್ತಿದೆ ಎಂದು ದೂರಿದರು.


Spread the love

LEAVE A REPLY

Please enter your comment!
Please enter your name here