ಬೀದರ್: ಐದು ಗ್ಯಾರಂಟಿಗಳು ಒಳ್ಳೆಯದೋ, ಕೆಟ್ಟದ್ದೋ, ಜನರೇ ತೀರ್ಮಾನಿಸಲಿ ಎಂದು ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದ್ದಾರೆ. ಬೀದರ್ ನಲ್ಲಿ ಮಾತನಾಡಿದ ಅವರು, ನಾವು ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ.
ಇದನ್ನು ಇತರ ರಾಜ್ಯದವರು ಬಂದು ಗಮನಿಸಿ, ಮಾದರಿಯಾಗಿ ತೆಗೆದುಕೊಂಡು ಹೋಗುತ್ತಿದ್ದಾರೆ. ಆದರೆ, ಬಿಜೆಪಿಯವರಿಗೆ ತಲೆ ಕೆಟ್ಟಿದೆ. ಅವರ ಪಕ್ಷದಲ್ಲಿ ಏನಿದೆ? ಐದು ಗ್ಯಾರಂಟಿಗಳು ಒಳ್ಳೆಯದೋ, ಕೆಟ್ಟದ್ದೋ, ಜನರೇ ತೀರ್ಮಾನಿಸಲಿ ಎಂದು ಕಿಡಿಕಾರಿದ್ದಾರೆ.
ಇನ್ನೂ ನಾವು ಪ್ರತಿ ತಿಂಗಳು 2,000 ರೂಪಾಯಿ ಹಾಕುವುದಾಗಿ ಭರವಸೆ ನೀಡಿದ್ದೇವೆ. ಏನೋ ತಾಂತ್ರಿಕ ಕಾರಣದಿಂದ ತಡವಾಗಿರಬಹುದು. ಆದರೆ, ಎಲ್ಲ ಫಲಾನುಭವಿಗಳಿಗೂ ಹಣ ತಲುಪಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.



