ರಾಮನಗರ: ಸಂವಿಧಾನ ಎಲ್ಲ ಜಾತಿ ಒಂದೇ ಎಂದು ಹೇಳುವಾಗ ಜಾತಿಗಣತಿ ಯಾಕೆ ಬೇಕು ಎಂದು ಸಂಸದ ಡಾ ಸಿ ಎನ್ ಮಂಜುನಾಥ್ ಹೇಳಿದ್ದಾರೆ. ರಾಮನಗರದಲ್ಲಿ ಜಾತಿಗಣತಿ ಮಂಡನೆ ವಿಚಾರವಾಗಿ ಮಾತನಾಡಿದ ಅವರು, ಸಂವಿಧಾನ ಕೂಡ ಜಾತಿ ಬಗ್ಗೆ ಮಾತನಾಡಬಾರದು ಎಂದು ಹೇಳುತ್ತೆ. ಹೀಗಾಗಿ ಜಾತಿಗಣತಿ ಯಾಕೆ ಎಂಬುದು ಗೊತ್ತಿಲ್ಲ. ಈ ವಿಚಾರವನ್ನ ಜನಾಭಿಪ್ರಾಯಕ್ಕೆ ಬಿಡಬೇಕು ಎಂದರು.
ಭಾರತ ಜ್ಯಾತ್ಯಾತೀತ ರಾಷ್ಟ್ರವಾಗಿದೆ. ಜಾತಿಗಣತಿಗೆ ಯಾವುದೇ ಮಹತ್ವವಿಲ್ಲ. ಸಾಮಾಜಿಕ, ಶೈಕ್ಷಣಿಕವಾಗಿ ಬಂದ ಗಣತಿಯನ್ನ ಜಾತಿಗೆ ಹೋಲಿಕೆ ಮಾಡಬಾರದು. ಸಂವಿಧಾನ ಎಲ್ಲ ಜಾತಿ ಒಂದೇ ಎಂದು ಹೇಳುವಾಗ ಜಾತಿಗಣತಿ ಯಾಕೆ ಬೇಕು.
ಇದರಿಂದ ಜಾತಿಜಾತಿಗಳ ನಡುವೆ ವೈಮನಸ್ಸು, ಕಂದಕಗಳು ಇನ್ನು ಜಾಸ್ತಿ ಆಗುತ್ತದೆ. ಎಲ್ಲಾ ಜಾತಿಗಳಲ್ಲೂ ಬಡವರು ಇದ್ದಾರೆ. ಜಾತಿಗಣತಿ ವಿಧಾನಸಭೆ, ವಿಧಾನಪರಿಷತ್ ನಲ್ಲಿ ಚರ್ಚೆ ಆಗಬೇಕು. ಸಾಮಾಜಿಕ ಕಳಕಳಿ, ತಜ್ಞರ ಜೊತೆ ಚರ್ಚೆ ಆಗಬೇಕು. ಆತುರದ ನಿರ್ಧಾರದ ಸರಿ ಅಲ್ಲ ಎಂದು ಸಂಸದರು ಹೇಳಿದ್ದಾರೆ.