ಕನ್ನಡತಿ ಧಾರವಾಹಿ ಖ್ಯಾತಿಯ ನಟಿ ರಂಜನಿ ರಾಘವನ್ ಕಳೆದ ಒಂದೆರಡು ದಿನಗಳ ಹಿಂದೆ ನಟ ಕಮಲ್ ಹಾಸನ್ ಗೆ ಕನ್ನಡ ಪುಸ್ತಕವನ್ನು ನೀಡಿದ್ದರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ ಈ ಫೋಟೋ ನೋಡಿ ಹಲವು ನಾನಾ ರೀತಿಯ ಕಾಮೆಂಟ್ ಮಾಡಿದ್ದರು. ಅದಕ್ಕೆ ಇದೀಗ ಸ್ವತಃ ರಂಜನಿ ರಾಘವನ್ ಸ್ಪಷ್ಟನೆ ನೀಡುವ ವಿಡಿಯೋ ಶೇರ್ ಹಂಚಿಕೊಂಡಿದ್ದಾರೆ.
ಈ ವಿಡಿಯೋ ಮೂಲಕ ಕಮಲ್ ಹಾಸನ್ಗೆ “ಕನ್ನಡ ಪುಸ್ತಕ” ಯಾಕೆ ಕೊಟ್ಟೆ ಅನ್ನೋದನ್ನ ನಟಿ ಸ್ಪಷ್ಟ ಪಡಿಸಿದ್ದಾರೆ. ಜೊತೆಗೆ ಕಮಲ್ ಶುಭ ಹಾರೈಕೆಯ ವಿಷಯವನ್ನ ಇಟ್ಟುಕೊಂಡು ಡಿ ಡಿ ಢಿಕ್ಕಿ ಟೀಸರ್ ರಿಲೀಸ್ ಪ್ಲಾನ್ ಅನ್ನು ಕೈ ಬಿಟ್ಟಿದ್ದಾರೆ.
ಕಮಲ್ ಹಾಸನ್ ಅವರನ್ನ ಮೂರು ತಿಂಗಳ ಹಿಂದೆ ಭೇಟಿ ಆಗಿದ್ದೇವು. ಡಿ ಡಿ ಢಿಕ್ಕಿ ಚಿತ್ರದ ನಿರ್ಮಾಪಕರು ಜೊತೆಗೆ ಇದ್ದರು. ಕಷ್ಟಪಟ್ಟು ಒಟ್ಟಿಗೆ ಹೋಗಿದ್ದೇವು. ಕಮಲ್ ಹಾಸನ್ ನಮ್ಮ ಚಿತ್ರದ ಕಂಟೆಂಟ್ ಕೇಳಿ ತುಂಬಾನೆ ಖುಷಿಪಟ್ಟರು. ನಮ್ಮ ಚಿತ್ರದ ಪೊಸ್ಟರ್ ಹಿಡಿದು ಒಂದು ಫೋಟೋ ಕೂಡ ಕೊಟ್ಟಿದ್ದರು.
ಈ ಭೇಟಿಯ ಸಮಯದಲ್ಲಿಯೇ ನಾನು ಬರೆದ ಕನ್ನಡ ಪುಸ್ತಕ ಕೊಟ್ಟಿದ್ದೇನು. ಆ ಫೋಟೋಗಳಲ್ಲಿ ಕೆಲವು ಫೋಟೋಗಳನ್ನ ವಿವಾದ ಸಮಯದಲ್ಲಿಯೇ ಎಲ್ಲರೊಟ್ಟಿಗೆ ಶೇರ್ ಮಾಡಿದ್ದೇನೆ. ಆದರೆ, ಇದನ್ನ ಈಗ ಶೇರ್ ಮಾಡೋಕೆ ಕಾರಣವೂ ಇದೆ.
ಕಮಲ್ ಹಾಸನ್ ಕನ್ನಡದ ಬಗ್ಗೆ ಆ ರೀತಿ ಹೇಳಿದ್ರೆ ಯಾರು ಕೇಳ್ತಾರೆ. ಅದಕ್ಕೇನೆ ನಾನು ಅವರಿಗೆ ಕನ್ನಡ ಪುಸ್ತಕ ಕೊಟ್ಟಿರೋ ಫೋಟೋ ಹಾಕಿ ವಿರೋಧ ಮಾಡಿದ್ದೇನೆ. ಅದು ನನ್ನ ರೀತಿಯ ವಿರೋಧವೇ ಆಗಿದೆ. ಆದರೆ, ಈಗ ಈ ವಿಡಿಯೋ ಮಾಡೊಕೆ ಕಾರಣವೂ ಇದೆ. ನಾನು ಯಾಕೆ ಕನ್ನಡ ಪುಸ್ತಕ ಕೊಟ್ಟೆ. ಮೂರು ತಿಂಗಳ ಹಿಂದಿನ ಫೋಟೋವನ್ನ ಈಗ ಯಾಕೆ ಹಂಚಿಕೊಂಡೆ ಅನ್ನೋದನ್ನ ಸುಮಾರು ಜನ ಅರ್ಥ ಮಾಡಿಕೊಂಡಿದ್ದಾರೆ. ಆದರೂ ಕೆಲವರು ಬೇರೆ ಅರ್ಥ ಮಾಡಿಕೊಂಡಿದ್ದಾರೆ. ಅದಕ್ಕೇನೆ ಈ ವಿಡಿಯೋ ಅಂತ ರಜನಿ ಹೇಳಿದ್ದಾರೆ. ಜೊತೆಗೆ ತಮಿಳು ಭಾಷೆಯಿಂದ ಕನ್ನಡ ಹುಟ್ಟಿಲ್ಲ. ಗೊತ್ತಿರಲಿ ಅನ್ನೋದನ್ನ ಒತ್ತಿ ಹೇಳಿದ್ದಾರೆ.