ಬರೀ ನಾಯಿಗಳಿಗೆ ಏಕೆ..? ಬೆಕ್ಕು, ಹೆಗ್ಗಣಗಳಿಗೂ ಒಂದೊಂದು ಯೋಜನೆ ಮಾಡಿ: ಅಶೋಕ್ ವ್ಯಂಗ್ಯ

0
Spread the love

ಬೆಂಗಳೂರು: ಬರೀ ನಾಯಿಗಳಿಗೆ ಏಕೆ..? ಬೆಕ್ಕು, ಹೆಗ್ಗಣಗಳಿಗೂ ಒಂದೊಂದು ಯೋಜನೆ ಮಾಡಿ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಹಳ್ಳ ಬಿದ್ದು ಬೆಂಗಳೂರಿನ ರಸ್ತೆಗಳೆಲ್ಲವೂ ಹಾಳಾಗಿವೆ.

Advertisement

ಒಂದೊಂದು ಪೈಸೆ, ಒಂದೊಂದು ಲಕ್ಷಕ್ಕೂ ಅಲೆಯುವ ಪರಿಸ್ಥಿತಿ ಇದೆ. ಇಂಥ ಸಂದರ್ಭದಲ್ಲಿ ಬಿಬಿಎಂಪಿ ಹಣ ತಿನ್ನೋಕೆ ಒಂದು ದಾರಿ ಹುಡುಕಿಕೊಂಡಿದೆ ಅಂತ ಅಶೋಕ್ ಆರೋಪಿಸಿದ್ದಾರೆ.

ಬರೀ ನಾಯಿಗಳಿಗೆ ಏಕೆ..? ಬೆಕ್ಕುಗಳು ಇದ್ದಾವೆ, ಹೆಗ್ಗಣಗಳು ಇದ್ದಾವೆ, ಏನೇನು ಇದೆಯೋ ಹುಡುಕಿ ಅದಕ್ಕೆಲ್ಲ ಒಂದು ಸ್ಕೀಮ್ ಹಾಕಿ ಖರ್ಚು ಮಾಡಿ ಅಂತ ವ್ಯಂಗ್ಯವಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here