ಬೆಂಗಳೂರು: ಮದ್ವೆ ಆದಾಗ ಸುಂದರವಾಗಿದ್ದೆ, ಈಗ ದಪ್ಪ ಆಗಿದ್ಯಾ ಎಂದು ಗಂಡ ದಿನೇ ದಿನೇ ಕಿರಿಕ್ ತೆಗೆದು, ಅಲ್ಲದೇ ವರದಕ್ಷಿಣೆ ವಿಚಾರಕ್ಕೂ ಪದೇ ಪದೇ ಗಲಾಟೆ ಮಾಡಿ ತನ್ನ ಪತ್ನಿ, ಮಾವ, ಮಗನಿಗೆ ಖಾರದಪುಡಿ ಎರಚಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ನೆಲಗೆದರನಹಳ್ಳಿಯಲ್ಲಿ ನಡೆದಿದೆ. ಪುಲಿ ಸಾಯಿಕುಮಾರ್ ಎಂಬಾತನಿಂದ ಪತ್ನಿ ರಮ್ಯ ಹಾಗೂ ಮಾವನಿಗೆ ಹಲ್ಲೆ ಮಾಡಲಾಗಿದ್ದು,
ಖಾಸಗಿ ಕಾಲೇಜಿನಲ್ಲಿ ಅಸಿಸ್ಟಂಟ್ ಫ್ರೋಫೆಸರ್ ಆಗಿದ್ದ ರಮ್ಯಾ ಹಾಗೂ ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿದ್ದ ಪುಲಿ ಸಾಯಿಕುಮಾರ್ 2021 ರಲ್ಲಿ ಮ್ಯಾಟ್ರಿಮೋನಿ ಮೂಲಕ ಪರಿಚಯವಾಗಿ ಮದ್ವೆ ಆಗಿದ್ರು. ಮದ್ವೆ ಆದಾಗಿನಿಂದಲೂ ವರದಕ್ಷಿಣೆ ನೀಡುವಂತೆ ಪೀಡಿಸಿದ್ದ ಎಂದು ರಮ್ಯಾ ಆರೋಪಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆಯೂ ಆರ್ ಆರ್ ನಗರದಲ್ಲಿ ಪುಲಿ ಸಾಯಿಕುಮಾರ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. 6ನೇ ತಾರೀಖು ಕ್ಲುಲ್ಲಕ ಕಾರಣಕ್ಕೆ ಗಲಾಟೆ ಮಾಡಿ ಹಲ್ಲೆ ಮಾಡಿದ್ದನಂತೆ, ಖಾರದಪುಡಿ ಎರಚಿ ಸಿನಿಮೀಯ ರೀತಿಯಲ್ಲಿ ಹಲ್ಲೆ ಮಾಡಿದ್ದನು, ರಮ್ಯಾ ತಂದೆಗೂ ಖಾರದಪುಡಿ ಎರಚಿ ಹಲ್ಲೆ ಮಾಡಿದ್ದಾರೆ ಎಂದು ಸಂತ್ರಸ್ತ ಮಹಿಳೆ ರಮ್ಯಾ ಆರೋಪಿಸಿ ಪೀಣ್ಯಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.