ಕಾಡಾನೆ ದಾಳಿ: ಕಾರು- ಬೈಕ್ ಮೇಲೆ ತೆಂಗಿನ ಮರ ಉರುಳಿಸಿದ ಪುಂಡಾನೆ.. ವಾಹನಗಳು ಜಖಂ!

0
Spread the love

ಮಡಿಕೇರಿ:– ಕಾರು ಹಾಗೂ ಬೈಕ್ ಮೇಲೆ ಕಾಡಾನೆ ದಾಳಿ ಮಾಡಿ ಸಂಪೂರ್ಣ ಜಖಂಗೊಳಿಸಿರುವ ಘಟನೆ ಇಲ್ಲಿನ ವಿರಾಜಪೇಟೆಯ ಮಾಲ್ದಾರೆ ಹಾಗೂ ಮಠ ಗ್ರಾಮದಲ್ಲಿ ಜರುಗಿದೆ.

Advertisement

ಹೇಮಂತ್ ಅವರ ಮನೆಯ ಸಮೀಪ ನಿಲ್ಲಿಸಿದ್ದ ಕಾರಿನ ಮೇಲೆ ಅಲ್ಲೇ ಇದ್ದ ತೆಂಗಿನ ಮರವನ್ನು ಆನೆ ತಳ್ಳಿ ಹಾಕಿದೆ. ಇದರಿಂದ ಕಾರು ಸಂಪೂರ್ಣ ಜಖಂಗೊಂಡಿದೆ. ಮಾಲ್ದಾರೆ ಗ್ರಾಮದ ಮುತ್ತಪ್ಪ ಹಾಗೂ ಗಣಪತಿ ದೇವಸ್ಥಾನ ಪಕ್ಕ ನಿಲ್ಲಿಸಿದ್ದ ಆಸ್ತಾನ ಹಾಡಿಯ ರಮೇಶ್‌ ಅವರ ಬೈಕ್ ಮೇಲೆ ಆನೆ ದಾಳಿ ಮಾಡಿದೆ. ಇದರಿಂದ ಬೈಕ್‌ ಜಖಂಗೊಂಡಿದೆ. ಇನ್ನೂ, ಕಾರ್ಮಿಕರ ಮೇಲೂ ಕಾಡಾನೆ ದಾಳಿಗೆ ಯತ್ನಿಸಿದೆ. ಕೂಡಲೇ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love

LEAVE A REPLY

Please enter your comment!
Please enter your name here