ಸಿದ್ದರಾಮಯ್ಯ ಸಂಪುಟ ಸೇರುತ್ತಾರಾ ಬಿ.ಕೆ ಹರಿಪ್ರಸಾದ್..? ಹೆಚ್ಚಾಯ್ತು ಕುತೂಹಲ!

0
Spread the love

ಬೆಂಗಳೂರು: ಹಲವಾರು ದಿನಗಳಿಂದ ಸಿಎಂ ಸಿದ್ದರಾಮಯ್ಯರನ್ನು ಟೀಕಿಸುತ್ತಲೇ ಬಂದಿದ್ದ ಕಾಂಗ್ರೆಸ್ ಎಂಎಲ್​ಸಿ ಬಿಕೆ ಹರಿಪ್ರಸಾದ್ ಇದೀಗ ದಿಢೀರನೆ ಸಿಎಂ ನಿವಾಸಕ್ಕೆ ಆಗಮನಿಸಿ ಸುಮಾರು ಒಂದು ತಾಸು ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ಕಾಂಗ್ರೆಸ್​ ಪಾಳಯದಲ್ಲಿ ನಡೆದ ಈ ವಿದ್ಯಮಾನ ರಾಜ್ಯ ರಾಜಕೀಯದಲ್ಲಿ ಅಚ್ಚರಿಗೆ ಕಾರಣವಾಗಿದೆ.

Advertisement

ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಸಂಪುಟ ಸೇರಲಿರುವ ಬಿ ಕೆ ಹರಿಪ್ರಸಾದ್ ಅವರು  ನಾಗೇಂದ್ರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಬಿ ಕೆ ಹರಿಪ್ರಸಾದ್ ನೇಮಕ ಮಾಡುವ ಸಾಧ್ಯತೆಗಳು ಬಹಳ ಹೆಚ್ಚಾಗಿ ಕಂಡುಬರುತ್ತಿದೆ. ಶುಕ್ರವಾರ ಜನಾಂದೋಲನ ಸಭೆ ಬಳಿಕ ಸಂಪುಟ ರಚನೆ ಸಾಧ್ಯತೆ ಮಾಡಲಾಗಿದ್ದು  ಶನಿವಾರ ಸಂಪುಟ ರಚನೆ ಸಾಧ್ಯತೆ ಎಂದು ಬಲ್ಲ ಮೂಲಗಳ ಪ್ರಕಾರ ಮಾಹಿತಿ ಹೊರಬೀಳಲಿದೆ.

 


Spread the love

LEAVE A REPLY

Please enter your comment!
Please enter your name here