ಹೃದಯಾಘಾತಕ್ಕೆ ಮಹಿಳೆ ಬಲಿ: ಕೆ.ಎನ್.ರಾಜಣ್ಣರ 75ನೇ ವರ್ಷದ ಅಭಿನಂದನಾ ಕಾರ್ಯಕ್ರಮದಲ್ಲಿ ದುರಂತ!

0
Spread the love

ತುಮಕೂರು:- ಹೃದಯಾಘಾತಕ್ಕೆ ಮಹಿಳೆ ಸಾವನ್ನಪ್ಪಿರುವ ಘಟನೆ ಗುಬ್ಬಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಕೆ.ಎನ್.ರಾಜಣ್ಣರ 75ನೇ ವರ್ಷದ ಅಭಿನಂದನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಈ ದುರಂತ ಸಂಭವಿಸಿದೆ. 55 ವರ್ಷದ ಸುನಂದಮ್ಮ ಮೃತ ಮಹಿಳೆ..

Advertisement

ತುಮಕೂರಿನಲ್ಲಿ ಕೆ.ಎನ್.ರಾಜಣ್ಣರ 75ನೇ ವರ್ಷದ ಅಭಿನಂದನಾ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ತುರುವೇಕೆರೆ ತಾಲೂಕಿನ, ಸೀಗೇಹಳ್ಳಿಯಿಂದ ಬಸ್ ನಲ್ಲಿ‌ ಸಾಕಷ್ಟು ಜನ ಬಂದಿದ್ದರು. ಇದೇ ಬಸ್ ನಲ್ಲಿ ಬಂದಿದ್ದ ಮಹಿಳೆ, ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ.

ಗುಬ್ಬಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.


Spread the love

LEAVE A REPLY

Please enter your comment!
Please enter your name here